ಬಿಜೆಪಿ ಎನ್ಸಿಪಿಯನ್ನು ಯಾವ ರೀತಿ ಒಡೆದಿತ್ತು ಎಂದರೆ ಶರದ್ ಪವಾರ್ ನೇತೃತ್ವದ ಪಕ್ಷಕ್ಕೆ ಭವಿಷ್ಯವೇ ಇಲ್ಲದಂತಾಗಿತ್ತು. ಆದರೆ ಎನ್ಸಿಪಿ ಕುಗ್ಗಲಿಲ್ಲ.ಈ ಚುನಾವಣೆಯಲ್ಲಿ ಎನ್ಸಿಪಿ 50ಕ್ಕಿಂತ ಹೆಚ್ಚು ಸೀಟುಗಳನ್ನು ಗಳಿಸಿದ್ದು, ಕಾಂಗ್ರೆಸ್ 44 ಸೀಟುಗಳನ್ನು ಗಳಿಸಿತ್ತು. ಅಧಿಕಾರದಲ್ಲಿರುವವರು ಧಿಮಾಕು ತೋರಿಸಬಾರದು ಎಂಬುದಕ್ಕೆ ಇದೊಂದು ಎಚ್ಚರಿಕೆ ಎಂದು ಶಿವಸೇನೆ ಹೇಳಿದೆ.