ಸಾಂಪ್ರದಾಯಿಕ ಕಪ್ಪು ಬಟ್ಟೆ ಧರಿಸಿ, ತಲೆಯ ಮೇಲೆ ಇರುಮುಡಿ ಕಟ್ಟು (ಭಕ್ತರು ದೇಗುಲಕ್ಕೆ ತರುವ ಸಾಂಪ್ರದಾಯಿಕ ಹರಕೆಯ ಕಟ್ಟು) ಹೊತ್ತು ಬಂದಿದ್ದ ವ್ರತಧಾರಿ ಭಕ್ತರ ದಂಡು ದೀಪಾರಾಧನೆಗಾಗಿ ದೇವಾಲಯದ ಸಂಕೀರ್ಣದಲ್ಲಿ ಮತ್ತು ಸುತ್ತಮುತ್ತ ಬೆಳಿಗ್ಗೆಯಿಂದಲೇ ಕಾಯುತ್ತಿತ್ತು. ಸುಮಾರು 85 ಕಿಲೋಮೀಟರ್ ದೂರದಲ್ಲಿರುವ ಪಂದಳಂ ಅರಮನೆಯಿಂದ ಎರಡು ದಿನಗಳ ಹಿಂದೆ ಆರಂಭವಾದ ವಿಧ್ಯುಕ್ತ ಮೆರವಣಿಗೆಯಲ್ಲಿ ದೀಪರಾಧನೆಗೆ ಕೆಲವೇ ಕ್ಷಣಗಳ ಮೊದಲು ತಿರುವಾಭರಣ (ಪವಿತ್ರ ಆಭರಣ)ಗಳನ್ನು ಇಲ್ಲಿಗೆ ತರಲಾಯಿತು. ಸಂಜೆ 6.45ರ ಸುಮಾರಿಗೆ ಅಯ್ಯಪ್ಪ ದೇವರ ಮೂರ್ತಿಯನ್ನು ಆಭರಣಗಳಿಂದ ಅಲಂಕರಿಸಿ, ದೀಪಾರಾಧನೆ ನಂತರ (ಆರತಿ) ದೇಗುಲದ ಬಾಗಿಲನ್ನು ಭಕ್ತರ ದರ್ಶನಕ್ಕೆ ತೆರೆಯಲಾಯಿತು. ಪುರಾಣದ ಪ್ರಕಾರ, ಅಯ್ಯಸ್ವಾಮಿ ಜನಿಸಿದ ಮತ್ತು ಬಾಲ್ಯ ಕಳೆದ ಪಂದಳಂ ಅರಮನೆಯಿಂದ ತಿರುವಾಭರಣವನ್ನು ತಂದು, ದೀಪಾರಾಧನೆಗೂ ಮುನ್ನ ಮೂರ್ತಿ ಅಲಂಕರಿಸಲಾಗುತ್ತದೆ.