<p><strong>ಮುಂಬೈ:</strong> ಜಾಗ ಬಿಡುವಂತೆ ಕೇಳಿಕೊಂಡ ಖಾಸಗಿ ಕ್ಯಾಬ್ನ ಚಾಲಕನನ್ನು ಇಲ್ಲಿನ ವಿಲೆ ಪಾರ್ಲೆ ವಿಮಾನ ನಿಲ್ದಾಣದಿಂದ 6 ಕಿ.ಮೀ. ದೂರದವರೆಗೆ ಎರ್ಟಿಗಾ ಕಾರಿನ ಬಾನೆಟ್ ಮೇಲೆ ಮಂಗಳವಾರ ರಾತ್ರಿ ಎಳೆದೊಯ್ಯಲಾಗಿದೆ.</p>.<p>ಎರ್ಟಿಗಾ ಕಾರಿನ ಚಾಲಕನು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಮತ್ತೊಬ್ಬರಿಗಾಗಿ ಕಾಯುತ್ತಿದ್ದ. ಈ ವೇಳೆ ಖಾಸಗಿ ಕ್ಯಾಬ್ನ ಚಾಲಕನು ಜಾಗ ಬಿಡುವಂತೆ ಕೇಳಿಕೊಂಡ. ಇದು ಇಬ್ಬರ ನಡುವೆ ಜಗಳ ಶುರುವಾಗಲು ಕಾರಣವಾಗಿದೆ ಎಂದು ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಪೊಲೀಸರು ಬುಧವಾರ ತಿಳಿಸಿದ್ದಾರೆ.</p>.<p>ಕಾರು ಚಾಲಕರಿಬ್ಬರ ನಡುವಿನ ಜಗಳ ತಾರಕಕ್ಕೇರುತ್ತಿದ್ದಂತೆ, ಖಾಸಗಿ ಕ್ಯಾಬ್ ಚಾಲಕರು ತಮ್ಮ ಜೊತೆಗಾರನ ಬೆಂಬಲಕ್ಕೆ ಜಮಾಯಿಸಿದ್ದಾರೆ. ಹೆಚ್ಚಿನ ಜನರು ಸೇರಿದ್ದರಿಂದ ಗಾಬರಿಗೊಂಡ ಎರ್ಟಿಗಾ ಕಾರಿನ ಚಾಲಕ ತಕ್ಷಣವೇ ವೇಗವಾಗಿ ತನ್ನ ವಾಹನ ಚಲಾಯಿಸಲು ಮುಂದಾಗಿದ್ದಾನೆ.</p>.<p>ಕ್ಯಾಬ್ ಚಾಲಕನು ಎರ್ಟಿಗಾ ಕಾರಿಗೆ ಅಡ್ಡವಾಗಿ ಹೋಗಲು ಯತ್ನಿಸಿದ. ಸಾಧ್ಯವಾಗದಿದ್ದರಿಂದ ಬಾನೆಟ್ ಮೇಲೆ ಜಿಗಿದ. ಇದನ್ನು ಲೆಕ್ಕಿಸದ ಎರ್ಟಿಗಾ ಚಾಲಕನು ಮುಂಬೈನ ರಸ್ತೆಗಳಲ್ಲಿ 6 ಕಿ.ಮೀ. ವೇಗವಾಗಿ ಸಂಚರಿಸಿದ ಬಳಿಕ, ಜೋಗೇಶ್ವರಿ ಬಳಿ ನಿಲ್ಲಿಸಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. </p>.<p>ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಜಾಗ ಬಿಡುವಂತೆ ಕೇಳಿಕೊಂಡ ಖಾಸಗಿ ಕ್ಯಾಬ್ನ ಚಾಲಕನನ್ನು ಇಲ್ಲಿನ ವಿಲೆ ಪಾರ್ಲೆ ವಿಮಾನ ನಿಲ್ದಾಣದಿಂದ 6 ಕಿ.ಮೀ. ದೂರದವರೆಗೆ ಎರ್ಟಿಗಾ ಕಾರಿನ ಬಾನೆಟ್ ಮೇಲೆ ಮಂಗಳವಾರ ರಾತ್ರಿ ಎಳೆದೊಯ್ಯಲಾಗಿದೆ.</p>.<p>ಎರ್ಟಿಗಾ ಕಾರಿನ ಚಾಲಕನು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಮತ್ತೊಬ್ಬರಿಗಾಗಿ ಕಾಯುತ್ತಿದ್ದ. ಈ ವೇಳೆ ಖಾಸಗಿ ಕ್ಯಾಬ್ನ ಚಾಲಕನು ಜಾಗ ಬಿಡುವಂತೆ ಕೇಳಿಕೊಂಡ. ಇದು ಇಬ್ಬರ ನಡುವೆ ಜಗಳ ಶುರುವಾಗಲು ಕಾರಣವಾಗಿದೆ ಎಂದು ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಪೊಲೀಸರು ಬುಧವಾರ ತಿಳಿಸಿದ್ದಾರೆ.</p>.<p>ಕಾರು ಚಾಲಕರಿಬ್ಬರ ನಡುವಿನ ಜಗಳ ತಾರಕಕ್ಕೇರುತ್ತಿದ್ದಂತೆ, ಖಾಸಗಿ ಕ್ಯಾಬ್ ಚಾಲಕರು ತಮ್ಮ ಜೊತೆಗಾರನ ಬೆಂಬಲಕ್ಕೆ ಜಮಾಯಿಸಿದ್ದಾರೆ. ಹೆಚ್ಚಿನ ಜನರು ಸೇರಿದ್ದರಿಂದ ಗಾಬರಿಗೊಂಡ ಎರ್ಟಿಗಾ ಕಾರಿನ ಚಾಲಕ ತಕ್ಷಣವೇ ವೇಗವಾಗಿ ತನ್ನ ವಾಹನ ಚಲಾಯಿಸಲು ಮುಂದಾಗಿದ್ದಾನೆ.</p>.<p>ಕ್ಯಾಬ್ ಚಾಲಕನು ಎರ್ಟಿಗಾ ಕಾರಿಗೆ ಅಡ್ಡವಾಗಿ ಹೋಗಲು ಯತ್ನಿಸಿದ. ಸಾಧ್ಯವಾಗದಿದ್ದರಿಂದ ಬಾನೆಟ್ ಮೇಲೆ ಜಿಗಿದ. ಇದನ್ನು ಲೆಕ್ಕಿಸದ ಎರ್ಟಿಗಾ ಚಾಲಕನು ಮುಂಬೈನ ರಸ್ತೆಗಳಲ್ಲಿ 6 ಕಿ.ಮೀ. ವೇಗವಾಗಿ ಸಂಚರಿಸಿದ ಬಳಿಕ, ಜೋಗೇಶ್ವರಿ ಬಳಿ ನಿಲ್ಲಿಸಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. </p>.<p>ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>