ಲಖಿಂಪುರ್ ಖೇರಿಯಲ್ಲಿ ಕಳೆದ ವಾರದ ಸ್ಕಾಲರ್ ಶಿಪ್ ಅರ್ಜಿ ತುಂಬಲೆಂದು ಮನೆಯಿಂದ ಹೊರಹೋಗಿದ್ದ 17ರ ದಲಿತ ಯುವತಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಮೇಲೆ ಅತ್ಯಾಚಾರ ಎಸಗಿ, ವಿಕೃತವಾಗಿ ಕೊಲೆ ಮಾಡಿ ಪಾಳುಬಾವಿಯಲ್ಲಿ ಎಸೆಯಲಾಗಿತ್ತು. ಈ ಘಟನೆಗೂ ಮುನ್ನ ಜಿಲ್ಲೆಯಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಲಾಗಿತ್ತು.