<p><strong>ನವದೆಹಲಿ:</strong> ವ್ಯಕ್ತಿಯೊಬ್ಬನಿಗೆ ಗುದ್ದಿದ ಮಿನಿ ಬಸ್, ಬಾನೆಟ್ ಮೇಲೆ ಬಿದ್ದಿದ್ದ ಆತನನ್ನು ತುಸು ದೂರ ಎಳೆದುಕೊಂಡು ಹೋದ ಘಟನೆ ದಕ್ಷಿಣ ದೆಹಲಿಯ ಲಜ್ಪತ್ನಗರ ಪ್ರದೇಶದಲ್ಲಿ ನಡೆದಿದೆ.</p><p>ಭಾನುವಾರ ರಾತ್ರಿ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅದರಲ್ಲಿ ಮಿನಿಬಸ್ನ ಬಾನೆಟ್ನಲ್ಲಿ ವ್ಯಕ್ತಿಯೊಬ್ಬ ನಿಂತಿರುವುದು ದಾಖಲಾಗಿದೆ. ಇನ್ನೊಂದು ವಿಡಿಯೊದಲ್ಲಿ ಬಾನೆಟ್ನಿಂದ ಇಳಿಯುವ ದೃಶ್ಯಗಳಿವೆ.</p>.ದಾಂಡೇಲಿ: ಅಪರಿಚಿತನ ಶವ ಎಳೆದುಕೊಂಡು ಹೋದ ಮೊಸಳೆ.<p>ಈ ಬಗ್ಗೆ ರಾತ್ರಿ 11.30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಡಿಎನ್ಡಿ ಮೇಲ್ಸೇತುವೆ ಮೂಲಕ ನೋಯ್ಡಾಗೆ ತೆರಳುವ ವೇಳೆ ಘಟನೆ ನಡೆದಿದ್ದಾಗಿ ಕರೆ ಮಾಡಿದ ವ್ಯಕ್ತಿ ತಿಳಿಸಿದ್ದಾನೆ. ಲಜ್ಪತ್ನಗರದಲ್ಲಿ ಮಿನಿಬಸ್ ವ್ಯಕ್ತಿಗೆ ಗುದ್ದಿದ್ದು, ತುಸು ದೂರು ಎಳೆದುಕೊಂಡು ಹೋಗಿದೆ. </p><p>ಕರೆ ಮಾಡಿದ ವ್ಯಕ್ತಿ ಮಿನಿಬಸ್ ಅನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯ ಆಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p><p>ಬಳಿಕ ಕರೆ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಿದಾಗ, ತಾನು ಉತ್ತರ ಪ್ರದೇಶದಲ್ಲಿರುವುದಾಗಿಯೂ, ದೆಹಲಿಗೆ ಬರಲು ಅಸಾಧ್ಯ ಎಂದು ಹೇಳಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ. </p>.ನಿಯಮ ಉಲ್ಲಂಘನೆ: ಅಪಘಾತ ಹೆಚ್ಚಳ. <p>ದೆಹಲಿಗೆ ಬರುವಂತೆ ಅವರ ಮನವೊಲಿಸಲಾಗುತ್ತಿದ್ದು, ಬಳಿಕ ದೂರು ಪಡೆದು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವ್ಯಕ್ತಿಯೊಬ್ಬನಿಗೆ ಗುದ್ದಿದ ಮಿನಿ ಬಸ್, ಬಾನೆಟ್ ಮೇಲೆ ಬಿದ್ದಿದ್ದ ಆತನನ್ನು ತುಸು ದೂರ ಎಳೆದುಕೊಂಡು ಹೋದ ಘಟನೆ ದಕ್ಷಿಣ ದೆಹಲಿಯ ಲಜ್ಪತ್ನಗರ ಪ್ರದೇಶದಲ್ಲಿ ನಡೆದಿದೆ.</p><p>ಭಾನುವಾರ ರಾತ್ರಿ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅದರಲ್ಲಿ ಮಿನಿಬಸ್ನ ಬಾನೆಟ್ನಲ್ಲಿ ವ್ಯಕ್ತಿಯೊಬ್ಬ ನಿಂತಿರುವುದು ದಾಖಲಾಗಿದೆ. ಇನ್ನೊಂದು ವಿಡಿಯೊದಲ್ಲಿ ಬಾನೆಟ್ನಿಂದ ಇಳಿಯುವ ದೃಶ್ಯಗಳಿವೆ.</p>.ದಾಂಡೇಲಿ: ಅಪರಿಚಿತನ ಶವ ಎಳೆದುಕೊಂಡು ಹೋದ ಮೊಸಳೆ.<p>ಈ ಬಗ್ಗೆ ರಾತ್ರಿ 11.30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಡಿಎನ್ಡಿ ಮೇಲ್ಸೇತುವೆ ಮೂಲಕ ನೋಯ್ಡಾಗೆ ತೆರಳುವ ವೇಳೆ ಘಟನೆ ನಡೆದಿದ್ದಾಗಿ ಕರೆ ಮಾಡಿದ ವ್ಯಕ್ತಿ ತಿಳಿಸಿದ್ದಾನೆ. ಲಜ್ಪತ್ನಗರದಲ್ಲಿ ಮಿನಿಬಸ್ ವ್ಯಕ್ತಿಗೆ ಗುದ್ದಿದ್ದು, ತುಸು ದೂರು ಎಳೆದುಕೊಂಡು ಹೋಗಿದೆ. </p><p>ಕರೆ ಮಾಡಿದ ವ್ಯಕ್ತಿ ಮಿನಿಬಸ್ ಅನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯ ಆಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p><p>ಬಳಿಕ ಕರೆ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಿದಾಗ, ತಾನು ಉತ್ತರ ಪ್ರದೇಶದಲ್ಲಿರುವುದಾಗಿಯೂ, ದೆಹಲಿಗೆ ಬರಲು ಅಸಾಧ್ಯ ಎಂದು ಹೇಳಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ. </p>.ನಿಯಮ ಉಲ್ಲಂಘನೆ: ಅಪಘಾತ ಹೆಚ್ಚಳ. <p>ದೆಹಲಿಗೆ ಬರುವಂತೆ ಅವರ ಮನವೊಲಿಸಲಾಗುತ್ತಿದ್ದು, ಬಳಿಕ ದೂರು ಪಡೆದು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>