ಇದೇ ವಿಷಯವಾಗಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರತಿಕ್ರಿಯಿಸಿ, ’ವಿದೇಶಾಂಗ ಸಚಿವರಿಗೆ ಬಿಜೆಪಿ ಹಳೇ ಕಥೆಯನ್ನೇ ನೀಡಿದೆ. ಸಚಿವರು ಹೊಸತನ್ನು ಹೇಳುವುದನ್ನು ರೂಢಿಸಿಕೊಳ್ಳಬೇಕು‘ ಎಂದು ಕುಟುಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಹಿಂದಿನ ಸರ್ಕಾರವನ್ನು ವಿದೇಶಿ ನೆಲದಲ್ಲಿ ನಿಂತು ಟೀಕಿಸುವುದನ್ನು ಆರಂಭಿಸಿದ್ದೇ ಈಗಿನ ಪ್ರಧಾನಿ. ರಾಹುಲ್ ಗಾಂಧಿ ಸತ್ಯವನ್ನೇ ಹೇಳಿದ್ದಾರೆ. ದೇಶದ ಸಂವಿಧಾನದ ಮೇಲೆ ನಿರಂತರವಾಗಿ ನಡೆಯುತ್ತಿರುವ ಯೋಜಿತ ಹಾಗೂ ವ್ಯವಸ್ಥಿತ ದಾಳಿಯನ್ನು ಹೇಳಿದ್ದಾರೆ‘ ಎಂದಿದ್ದಾರೆ.