ಗಣಿಯಲ್ಲಿನ ನೀರನ್ನು ಹೊರಹಾಕಲು ಬೇಕಿರುವ ಅಧಿಕ ಸಾಮರ್ಥ್ಯದ ಪಂಪ್ಗಳನ್ನು ಒದಗಿಸಲು ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ ಮುಂದೆ ಬಂದಿದೆ.ಕಂಪನಿಯ ತಜ್ಞರ ತಂಡವು ಈಗಾಗಲೇ ಲುಂಥಾರಾಗೆ ತಲುಪಿದೆ. ಅವಘಡದ ಸ್ಥಳವನ್ನು ಪರಿಶೀಲಿಸಿ, ಯಾವ ಸ್ವರೂಪದ ಪಂಪ್ ಅಗತ್ಯವಿದೆ ಎಂದು ತಂಡವು ತಿಳಿಸಲಿದ್ದಾರೆ. ಆನಂತರ ಪಂಪ್ ಅನ್ನು ಅಲ್ಲಿಗೆ ಕಳುಹಿಸಲಾಗುತ್ತದೆ ಎಂದು ಕಂಪನಿಯ ಮೂಲಗಳು ಹೇಳಿವೆ.