ಈ ಆರೋಪಕ್ಕೆ ಪ್ರತಿಕ್ರಿಯಿಸಿದ ವಿಎಚ್ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್, ‘ಪ್ರಾಥಮಿಕ ತನಿಖೆ ನಡೆಸದೆ ಕಳ್ಳಸಾಗಾಣಿಕೆದಾರನ ಸಹೋದರ ಹೇಳಿದ ಹೆಸರುಗಳು ಘಟನೆಗೆ ಕಾರಣವೆಂದು ರಾಜಸ್ಥಾನ ಪೊಲೀಸರು ಊಹಿಸಿದ್ದಾರೆಂದು ತೋರುತ್ತದೆ. ಪ್ರಕರಣದ ಬಗ್ಗೆ ನ್ಯಾಯಸಮ್ಮತ ತನಿಖೆ ನಂತರ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ವ್ಯಕ್ತಿಯನ್ನು ಬಂಧಿಸಬಾರದು’ ಎಂದು ಒತ್ತಾಯಿಸಿದರು.