ಇಲ್ಲಿನ ಪೊಲೀಸ್ ಲೈನ್ ಠಾಣೆಯಿಂದ ಸಬ್ ಇನ್ಸ್ಪೆಕ್ಟರ್ ವಿಜಯ್ ಪ್ರತಾಪರನ್ನು 65 ಕಿ.ಮೀ ದೂರ ಇರುವ ಬಿಥುಲಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಅವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಬಿಥುಲಿಗೆ ಬರಿಗಾಲಿನಲ್ಲೇ ಓಡಿದ್ದರು. ಇದರಿಂದ ತೀವ್ರವಾಗಿ ಬಳಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.