ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರ ಕಾರು ಅಪಘಾತಕ್ಕಿಡಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.
ನವಿ ಮುಂಬೈ ಸಮೀಪದ ಸಂಪದ ಪ್ರದೇಶದಲ್ಲಿ ಕಾರು ಅಪಘಾತಕ್ಕಿಡಾಗಿದ್ದು ರಾಜ್ ಠಾಕ್ರೆ ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
Maharashtra: A vehicle belonging to the convoy of Maharashtra Navnirman Sena (MNS) chief Raj Thackeray met with an accident near Sanpada in Navi Mumbai, today, while he was returning from Ekvira Devi Darshan in Lonavala. No casualty/injury reported. pic.twitter.com/c52W4hRaSs
ಲೋನಾವಲದಲ್ಲಿರುವ ಏಕ್ವಿರಾ ದೇವಿಯ ದರ್ಶನ ಪಡೆದು ವಾಪಾಸು ಮರಳುತ್ತಿದ್ದವೇಳೆ ಈ ಅವಘಡ ಸಂಭವಿಸಿದೆ. ರಾಜ್ ಠಾಕ್ರೆ ಅವರ ಕಾರಿಗೆ ಎದುರಿನಿಂದ ಬಂದ ಮಹೇಂದ್ರ ಜೀಪು ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.