‘ಕಾಶಿ ಮತ್ತು ತಮಿಳುನಾಡು, ಸಂಸ್ಕೃತಿ ಮತ್ತು ಸಭ್ಯತೆಯ ನೆಲೆಗಳಾಗಿವೆ. ಜಗತ್ತಿನ ಅತ್ಯಂತ ಹಳೆಯ ಭಾಷೆಗಳಾದ ಸಂಸ್ಕೃತ ಹಾಗೂ ತಮಿಳಿನ ನೆಲೆವೀಡಾಗಿವೆ. ನಮ್ಮ ದೇಶದಲ್ಲಿ ‘ಸಂಗಮ’ಕ್ಕೆ ಪವಿತ್ರ ಸ್ಥಾನವಿದೆ. ಅದು ನದಿಗಳ ಸಂಗಮವಾಗಿರಬಹುದು, ಜ್ಞಾನ–ವಿಜ್ಞಾನ, ಸಮಾಜ–ಸಂಸ್ಕೃತಿಯ ಸಂಗಮವಿರಬಹುದು. ಎಲ್ಲವನ್ನೂ ನಾವು ಸಂಭ್ರಮಿಸಬೇಕು. ಕಾಶಿ–ತಮಿಳು ಸಂಗಮವು ದೇಶದ ವೈವಿಧ್ಯತೆ ಮತ್ತು ಅನನ್ಯತೆಯ ಪ್ರತೀಕ. ಇದು ಗಂಗಾ ಮತ್ತು ಯಮುನಾ ನದಿಗಳ ಸಂಗಮದಷ್ಟೇ ಪವಿತ್ರವಾದುದು’ ಎಂದು ಹೇಳಿದ್ದಾರೆ.