<p><strong>ಮದುರಾಂತಕಂ</strong>: ‘ತಮಿಳುನಾಡಿನಲ್ಲಿನ ಡಿಎಂಕೆ ನೇತೃತ್ವದ ಸರ್ಕಾರವು ಭ್ರಷ್ಟಾಚಾರ, ಮಾಫಿಯಾ ಹಾಗೂ ಅಪರಾಧ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಹಾಗಾಗಿ, ಈ ಸರ್ಕಾರ ಪತನಗೊಳ್ಳುವುದಕ್ಕೆ ದಿನಗಣನೆ ಆರಂಭವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.</p>.<p>ನಗರದಲ್ಲಿ ಎನ್ಡಿಎ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು,‘ಡಿಎಂಕೆಗೆ ರಾಜ್ಯದ ಜನರು ಎರಡು ಬಾರಿ ಸ್ಪಷ್ಟ ಬಹುಮತ ನೀಡಿದ್ದರು. ಆದರೆ, ಆ ಪಕ್ಷವು ಈಗ ಜನರ ನಂಬಿಕೆಯನ್ನು ಕಳೆದುಕೊಂಡಿದೆ’ ಎಂದು ಹೇಳಿದರು.</p>.<p>ತಿರುಪರನ್ಕುಂಡ್ರಂ ಕಾರ್ತಿಕ ದೀಪ ಬೆಳಗುವ ಕುರಿತ ವಿವಾದ ಪ್ರಸ್ತಾಪಿಸಿದ ಅವರು,‘ಚುನಾವಣೆ ಲಾಭಕ್ಕಾಗಿ ಇಲ್ಲಿನ ಆರಾಧ್ಯದೈವ ಮುರುಗನ್ ಹಾಗೂ ನ್ಯಾಯಾಲಯಗಳಿಗೆ ಡಿಎಂಕೆ ಸರ್ಕಾರ ಅವಮಾನ ಮಾಡಿದೆ’ ಎಂದು ಟೀಕಿಸಿದರು.</p>.<p>ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಸ್ಮರಿಸಿದ ಮೋದಿ,‘ಜಯಲಲಿತಾ ಅವರು ಅಪರಾಧಗಳನ್ನು ಮಟ್ಟಹಾಕಿದ್ದರು. ಈ ಸರ್ಕಾರದ ಅವಧಿಯಲ್ಲಿ ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದಾರೆ’ ಎಂದು ಆರೊಪಿಸಿದರು.</p>.<p>ವೇದಿಕೆಯಲ್ಲಿ, ಎನ್ಡಿಎ ಅಂಗಪಕ್ಷಗಳಾದ ಎಐಎಡಿಎಂಕೆ ಹಾಗೂ ಎಎಂಎಂಕೆ ನಾಯಕರು ಉಪಸ್ಥಿತರಿದ್ದರು. ಇದೇ ವೇಳೆ, ಮುರುಗನ್ ದೇವರ ಭಾವಚಿತ್ರವುಳ್ಳ ಸ್ಮರಣಿಕೆಯನ್ನು ಮೋದಿ ಅವರಿಗೆ ನೀಡಿ, ಗೌರವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದುರಾಂತಕಂ</strong>: ‘ತಮಿಳುನಾಡಿನಲ್ಲಿನ ಡಿಎಂಕೆ ನೇತೃತ್ವದ ಸರ್ಕಾರವು ಭ್ರಷ್ಟಾಚಾರ, ಮಾಫಿಯಾ ಹಾಗೂ ಅಪರಾಧ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಹಾಗಾಗಿ, ಈ ಸರ್ಕಾರ ಪತನಗೊಳ್ಳುವುದಕ್ಕೆ ದಿನಗಣನೆ ಆರಂಭವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.</p>.<p>ನಗರದಲ್ಲಿ ಎನ್ಡಿಎ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು,‘ಡಿಎಂಕೆಗೆ ರಾಜ್ಯದ ಜನರು ಎರಡು ಬಾರಿ ಸ್ಪಷ್ಟ ಬಹುಮತ ನೀಡಿದ್ದರು. ಆದರೆ, ಆ ಪಕ್ಷವು ಈಗ ಜನರ ನಂಬಿಕೆಯನ್ನು ಕಳೆದುಕೊಂಡಿದೆ’ ಎಂದು ಹೇಳಿದರು.</p>.<p>ತಿರುಪರನ್ಕುಂಡ್ರಂ ಕಾರ್ತಿಕ ದೀಪ ಬೆಳಗುವ ಕುರಿತ ವಿವಾದ ಪ್ರಸ್ತಾಪಿಸಿದ ಅವರು,‘ಚುನಾವಣೆ ಲಾಭಕ್ಕಾಗಿ ಇಲ್ಲಿನ ಆರಾಧ್ಯದೈವ ಮುರುಗನ್ ಹಾಗೂ ನ್ಯಾಯಾಲಯಗಳಿಗೆ ಡಿಎಂಕೆ ಸರ್ಕಾರ ಅವಮಾನ ಮಾಡಿದೆ’ ಎಂದು ಟೀಕಿಸಿದರು.</p>.<p>ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಸ್ಮರಿಸಿದ ಮೋದಿ,‘ಜಯಲಲಿತಾ ಅವರು ಅಪರಾಧಗಳನ್ನು ಮಟ್ಟಹಾಕಿದ್ದರು. ಈ ಸರ್ಕಾರದ ಅವಧಿಯಲ್ಲಿ ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದಾರೆ’ ಎಂದು ಆರೊಪಿಸಿದರು.</p>.<p>ವೇದಿಕೆಯಲ್ಲಿ, ಎನ್ಡಿಎ ಅಂಗಪಕ್ಷಗಳಾದ ಎಐಎಡಿಎಂಕೆ ಹಾಗೂ ಎಎಂಎಂಕೆ ನಾಯಕರು ಉಪಸ್ಥಿತರಿದ್ದರು. ಇದೇ ವೇಳೆ, ಮುರುಗನ್ ದೇವರ ಭಾವಚಿತ್ರವುಳ್ಳ ಸ್ಮರಣಿಕೆಯನ್ನು ಮೋದಿ ಅವರಿಗೆ ನೀಡಿ, ಗೌರವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>