‘ಸತ್ಯದ ಹುಡುಕಾಟಕ್ಕಾಗಿ ವಿವಿಧ ವರ್ಗದವರು ಭಿನ್ನ ಮಾರ್ಗಗಳನ್ನು ಆರಿಸಿಕೊಳ್ಳುವರು. ನಾವು ಆಯ್ದುಕೊಳ್ಳುವ ಮಾರ್ಗಗಳು ಭಿನ್ನವಾಗಿರಬಹುದು. ಆದರೆ, ಗಮ್ಯಸ್ಥಾನ ಒಂದೇ ಆಗಿರುತ್ತದೆ... ಜೈನರು, ಸಿಖ್ಖರು– ಹೀಗೆ ನಮ್ಮ ಸಮಾಜದಲ್ಲಿ ಹಲವು ವರ್ಗಗಳಿವೆ. ಈ ದೇಶದ ಜನರಾಗಿದ್ದುಕೊಂಡು ನಾವೆಲ್ಲರೂ ಒಂದೇ ಆಗಿದ್ದೇವೆ. ಎಲ್ಲರೂ ಜತೆಯಾಗಿಯೇ ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಕರೆಕೊಟ್ಟರು.