<p><strong>ರಾಂಚಿ</strong> : ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಇತರರ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ.</p>.<p>ಅಫ್ಸರ್ ಅಲಿ ಬಂಧಿತ. ಹಣ ಅಕ್ರಮ ವರ್ಗಾವಣೆಯ ಇನ್ನೊಂದು ಪ್ರಕರಣದಡಿ ಈತ ನ್ಯಾಯಾಂಗ ಬಂಧನದಲ್ಲಿದ್ದು, ಜೈಲಿನಲ್ಲಿದ್ದ. ಕೋರ್ಟ್ ಅನುಮತಿ ಪಡೆದು ವಶಕ್ಕೆ ಪಡೆಯಲಾಗಿದೆ ಎಂದು ಇ.ಡಿ. ಮೂಲಗಳು ತಿಳಿಸಿವೆ.</p>.<p>ಜಾರ್ಖಂಡ್ನಲ್ಲಿ ಭೂಮಿ ಕಬಳಿಸಲು ದಾಖಲೆಗಳನ್ನು ತಿರುಚಿದ್ದ ಆರೋಪವು ಈತನ ಮೇಲಿದೆ. ಹೇಮಂತ್ ಸೊರೇನ್ ಮತ್ತು ಕಂದಾಯ ಇಲಾಖೆಯ ಮಾಜಿ ಸಬ್ ಇನ್ಸ್ಪೆಕ್ಟರ್ ಭಾನು ಪ್ರತಾಪ್ ಪ್ರಸಾದ್ ಈ ಪ್ರಕರಣದ ಇತರೆ ಆರೋಪಿಗಳು.</p>.<p>ಪ್ರಕರಣದ ಸಂಬಂಧ ಬಂಧಿಸಲಾದ ನಾಲ್ಕನೇ ಆರೋಪಿ ಈತನಾಗಿದ್ದಾನೆ. ಅಲ್ಲದೆ, ಇದೇ ಪ್ರಕರಣದಲ್ಲಿ ಸಂಪರ್ಕವಿದೆ ಎನ್ನಲಾದ ಅಂತು ಟಿರ್ಕೆ ಅವರಿಗೆ ಸೇರಿದ್ದ ತಾಣಗಳಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.</p>.<p>ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿಂದೆಯೇ ಈ ಪ್ರಕರಣ ಸಂಬಂಧ ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರನ್ನು ಇ.ಡಿ ಜನವರಿ ತಿಂಗಳಲ್ಲಿ ಬಂಧಿಸಿತ್ತು. ಸದ್ಯ ಅವರು ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ.</p>.<p>ರಾಂಚಿಯಲ್ಲಿ ಸುಮಾರು 8.86 ಎಕರೆ ಭೂಮಿಯನ್ನು ಅಕ್ರಮವಾಗಿ ಸುಪರ್ದಿಗೆ ತೆಗೆದುಕೊಂಡ ಆರೋಪ ಹೇಮಂತ್ ಮೇಲಿದ್ದು, ಇದೇ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ</strong> : ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಇತರರ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ.</p>.<p>ಅಫ್ಸರ್ ಅಲಿ ಬಂಧಿತ. ಹಣ ಅಕ್ರಮ ವರ್ಗಾವಣೆಯ ಇನ್ನೊಂದು ಪ್ರಕರಣದಡಿ ಈತ ನ್ಯಾಯಾಂಗ ಬಂಧನದಲ್ಲಿದ್ದು, ಜೈಲಿನಲ್ಲಿದ್ದ. ಕೋರ್ಟ್ ಅನುಮತಿ ಪಡೆದು ವಶಕ್ಕೆ ಪಡೆಯಲಾಗಿದೆ ಎಂದು ಇ.ಡಿ. ಮೂಲಗಳು ತಿಳಿಸಿವೆ.</p>.<p>ಜಾರ್ಖಂಡ್ನಲ್ಲಿ ಭೂಮಿ ಕಬಳಿಸಲು ದಾಖಲೆಗಳನ್ನು ತಿರುಚಿದ್ದ ಆರೋಪವು ಈತನ ಮೇಲಿದೆ. ಹೇಮಂತ್ ಸೊರೇನ್ ಮತ್ತು ಕಂದಾಯ ಇಲಾಖೆಯ ಮಾಜಿ ಸಬ್ ಇನ್ಸ್ಪೆಕ್ಟರ್ ಭಾನು ಪ್ರತಾಪ್ ಪ್ರಸಾದ್ ಈ ಪ್ರಕರಣದ ಇತರೆ ಆರೋಪಿಗಳು.</p>.<p>ಪ್ರಕರಣದ ಸಂಬಂಧ ಬಂಧಿಸಲಾದ ನಾಲ್ಕನೇ ಆರೋಪಿ ಈತನಾಗಿದ್ದಾನೆ. ಅಲ್ಲದೆ, ಇದೇ ಪ್ರಕರಣದಲ್ಲಿ ಸಂಪರ್ಕವಿದೆ ಎನ್ನಲಾದ ಅಂತು ಟಿರ್ಕೆ ಅವರಿಗೆ ಸೇರಿದ್ದ ತಾಣಗಳಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.</p>.<p>ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿಂದೆಯೇ ಈ ಪ್ರಕರಣ ಸಂಬಂಧ ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರನ್ನು ಇ.ಡಿ ಜನವರಿ ತಿಂಗಳಲ್ಲಿ ಬಂಧಿಸಿತ್ತು. ಸದ್ಯ ಅವರು ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ.</p>.<p>ರಾಂಚಿಯಲ್ಲಿ ಸುಮಾರು 8.86 ಎಕರೆ ಭೂಮಿಯನ್ನು ಅಕ್ರಮವಾಗಿ ಸುಪರ್ದಿಗೆ ತೆಗೆದುಕೊಂಡ ಆರೋಪ ಹೇಮಂತ್ ಮೇಲಿದ್ದು, ಇದೇ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>