‘ಹಿಂದೂ ರಾಷ್ಟ್ರ’ದ ಕುರಿತು ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ನೀಡಿದ್ದ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ನೀವು ಮತ್ತು ಬಿಜೆಪಿಯವರು ಕಮಲ್ನಾಥ್ ಅವರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿದ್ದೀರಿ. ಪ್ರಮಾಣ ವಚನವನ್ನು ಸಂವಿಧಾನದ ಮೇಲೆ ಸ್ವೀಕರಿಸಿದ್ದೀರೋ ಅಥವಾ ಹಿಂದೂ ರಾಷ್ಟ್ರದ ಮೇಲೆ ಸ್ವೀಕರಿಸಿದ್ದೀರೋ ಎಂದು ಪ್ರಧಾನಿ, ಗೃಹ ಸಚಿವ ಮತ್ತು ಮುಖ್ಯಮಂತ್ರಿಯನ್ನು ಕೇಳಲು ನಾನು ಬಯಸುತ್ತೇನೆ’ ಎಂದರು.