ನವದೆಹಲಿ: ₹526 ಕೋಟಿ ವಂಚಿಸಿದ ಆರೋಪದ ಮೇಲೆ ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಮುಖ್ಯಸ್ಥನನ್ನು ಹಣ ಅಕ್ರಮ ವರ್ಗಾವಣೆ ಮೊಕದ್ದಮೆಯಡಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯವು ಗುರುವಾರ ತಿಳಿಸಿದೆ.
ಕರಣ್ ಬಿಲ್ಡರ್ಸ್ ಆ್ಯಂಡ್ ಡೆವೆಲಪರ್ಸ್ ಸಂಸ್ಥೆಯ ಮುಖ್ಯಸ್ಥ ಮಹೇಶ್ ಭೂಪತ್ಕುಮಾರ್ ಓಜಾ ಎಂಬಾತನನ್ನು ಬೆಂಗಳೂರು ಪೊಲೀಸರು ಮೊದಲಿಗೆ ಬಂಧಿಸಿದ್ದರು. ಜನವರಿ 10ರಂದು ಇ.ಡಿ ವಶಕ್ಕೆ ಆತನನ್ನು ತೆಗೆದುಕೊಳ್ಳಲಾಯಿತು.
ಮಹೇಶ್ ಮತ್ತು ಇತರರು ಕೈಗೊಂಡಿದ್ದ ಯೋಜನೆಯೊಂದಕ್ಕೆ ಹಣ ಹೂಡಿದ್ದ ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ಕರ್ನಾಟಕ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆ ಎಫ್ಐಆರ್ಗಳ ಆಧಾರದ ಮೇಲೆ ಹಣ ಅಕ್ರಮ ವರ್ಗಾವಣೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.