<p><strong>ಮುಂಬೈ</strong>: 17 ಮಕ್ಕಳು ಸೇರಿದಂತೆ 19 ಮಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ರೋಹಿತ್ ಆರ್ಯ, ಪೊಲೀಸರು ಒಳಗೆ ಪ್ರವೇಶಿಸುವುದನ್ನು ತಡೆಯಲು, ತನ್ನ ರಕ್ಷಣೆಗಾಗಿ ಭಾರಿ ಬಂದೋಬಸ್ತ್ ಮಾಡಿಕೊಂಡಿದ್ದ ಎಂಬುದು ತಿಳಿದು ಬಂದಿದೆ. </p>.<p>ಪೊಲೀಸರ ಪ್ರವೇಶದ ಕುರಿತು ತಿಳಿದುಕೊಳ್ಳಲು ಆರ್.ಎ. ಸ್ಟುಡಿಯೊದ ಎಲ್ಲಾ ಕಿಟಕಿ, ಬಾಗಿಲುಗಳಿಗೆ ‘ಮೋಷನ್ ಡಿಟೆಕ್ಷನ್ ಸೆನ್ಸರ್’ಗಳನ್ನು (ಚಲನವಲನಗಳನ್ನು ಗ್ರಹಿಸುವ ಸಾಧನ) ಅಳವಡಿಸಿದ್ದ. ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಂದೇ ದಿಕ್ಕಿನೆಡೆಗೆ ತಿರುಗಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದರು. </p>.<p>ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಗುಂಡೇಟು ತಗುಲಿ ರೋಹಿತ್ ಆರ್ಯ ಸಾವಿಗೀಡಾದನು. ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ಅಪರಾಧ ವಿಭಾಗಕ್ಕೆ ವಹಿಸಲಾಗಿದೆ ಎಂದರು. </p>.<p>ಮಹಾರಾಷ್ಟ್ರ ಶಿಕ್ಷಣ ಇಲಾಖೆ ಜೊತೆಗೆ ರೋಹಿತ್ ಆರ್ಯ ನಿರ್ವಹಿಸಿದ ಯೋಜನೆಗಳ ಮಾಹಿತಿಯನ್ನು ಒದಗಿಸುವಂತೆ ಮಹಾರಾಷ್ಟ್ರ ಸಚಿವ ದಾದಾ ಭುಸೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. </p>.<p><strong>ಚಿತ್ರೀಕರಣದ ಕಥೆ ಕಟ್ಟಿದ್ದ:</strong> ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡು ಕೂಡಿ ಹಾಕಿರುವ ಕಥೆಯ ದೃಶ್ಯಗಳನ್ನು ಚಿತ್ರೀಕರಿಸುತ್ತಿರುವುದಾಗಿ ಆರೋಪಿ ರೋಹಿತ್ ಆರ್ಯ ಹೇಳಿದ್ದ ಎಂದು ವಿಡಿಯೊಗ್ರಾಫರ್ ರೋಹನ್ ಹೇಳಿದ್ದಾರೆ. ಇವರು ರೋಹಿತ್ ಜೊತೆ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: 17 ಮಕ್ಕಳು ಸೇರಿದಂತೆ 19 ಮಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ರೋಹಿತ್ ಆರ್ಯ, ಪೊಲೀಸರು ಒಳಗೆ ಪ್ರವೇಶಿಸುವುದನ್ನು ತಡೆಯಲು, ತನ್ನ ರಕ್ಷಣೆಗಾಗಿ ಭಾರಿ ಬಂದೋಬಸ್ತ್ ಮಾಡಿಕೊಂಡಿದ್ದ ಎಂಬುದು ತಿಳಿದು ಬಂದಿದೆ. </p>.<p>ಪೊಲೀಸರ ಪ್ರವೇಶದ ಕುರಿತು ತಿಳಿದುಕೊಳ್ಳಲು ಆರ್.ಎ. ಸ್ಟುಡಿಯೊದ ಎಲ್ಲಾ ಕಿಟಕಿ, ಬಾಗಿಲುಗಳಿಗೆ ‘ಮೋಷನ್ ಡಿಟೆಕ್ಷನ್ ಸೆನ್ಸರ್’ಗಳನ್ನು (ಚಲನವಲನಗಳನ್ನು ಗ್ರಹಿಸುವ ಸಾಧನ) ಅಳವಡಿಸಿದ್ದ. ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಂದೇ ದಿಕ್ಕಿನೆಡೆಗೆ ತಿರುಗಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದರು. </p>.<p>ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಗುಂಡೇಟು ತಗುಲಿ ರೋಹಿತ್ ಆರ್ಯ ಸಾವಿಗೀಡಾದನು. ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ಅಪರಾಧ ವಿಭಾಗಕ್ಕೆ ವಹಿಸಲಾಗಿದೆ ಎಂದರು. </p>.<p>ಮಹಾರಾಷ್ಟ್ರ ಶಿಕ್ಷಣ ಇಲಾಖೆ ಜೊತೆಗೆ ರೋಹಿತ್ ಆರ್ಯ ನಿರ್ವಹಿಸಿದ ಯೋಜನೆಗಳ ಮಾಹಿತಿಯನ್ನು ಒದಗಿಸುವಂತೆ ಮಹಾರಾಷ್ಟ್ರ ಸಚಿವ ದಾದಾ ಭುಸೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. </p>.<p><strong>ಚಿತ್ರೀಕರಣದ ಕಥೆ ಕಟ್ಟಿದ್ದ:</strong> ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡು ಕೂಡಿ ಹಾಕಿರುವ ಕಥೆಯ ದೃಶ್ಯಗಳನ್ನು ಚಿತ್ರೀಕರಿಸುತ್ತಿರುವುದಾಗಿ ಆರೋಪಿ ರೋಹಿತ್ ಆರ್ಯ ಹೇಳಿದ್ದ ಎಂದು ವಿಡಿಯೊಗ್ರಾಫರ್ ರೋಹನ್ ಹೇಳಿದ್ದಾರೆ. ಇವರು ರೋಹಿತ್ ಜೊತೆ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>