<p><strong>ಮುಂಬೈ: </strong>ಕೋವಿಡ್–19 ಪಿಡುಗು ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಗಣೇಶೋತ್ಸವವನ್ನು ಯಾವ ರೀತಿ ಆಯೋಜನೆ ಮಾಡಬಹುದು ಎಂಬುದನ್ನು ಚರ್ಚಿಸಲು ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್ ಅವರು ನಗರದ ಗಣೇಶ ಮಂಡಳಗಳ ಜೊತೆ ಸಭೆ ನಡೆಸಿದರು.</p>.<p>ಮುಂಬೈನಲ್ಲಿ ಸಾವಿರಾರು ಗಣೇಶ ಮಂಡಳಗಳು ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತವೆ. ಈ ಬಾರಿ 10 ದಿನಗಳ ಉತ್ಸವ ಆಗಸ್ಟ್ 22 ರಂದು ಆರಂಭವಾಗಲಿದೆ.</p>.<p>ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು. ಮಹಾರಾಷ್ಟ್ರ ಸರ್ಕಾರದ ಎಲ್ಲ ಆದೇಶಗಳನ್ನು ಪಾಲಿಸುವುದಾಗಿ ಮಂಡಳಗಳ ಮುಖ್ಯಸ್ಥರು ಭರವಸೆ ನೀಡಿದರು.</p>.<p>ಸರ್ಕಾರ ಸೂಚನೆ ನೀಡಿದರೆ ಈ ವರ್ಷ ಗಣೇಶೋತ್ಸವವನ್ನು ಆಚರಿಸುವುದಿಲ್ಲ. ಸದ್ಯ ತಲೆದೋರಿರುವ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸ್ವಾಸ್ಥ್ಯ ಮುಖ್ಯ ಎಂದು ಗಣೇಶ ಗಲ್ಲಿ ಮಂಡಳ ಕಾರ್ಯದರ್ಶಿ ಸ್ವಪ್ನಿಲ್ ಪರಬ್ ತಿಳಿಸಿದರು.</p>.<p><strong>ಮುಂದೂಡಿಕೆ: </strong>ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಡಾಲಾದಲ್ಲಿ ಜಿಎಸ್ಬಿ ಗಣೇಶೋತ್ಸವ ಸಮಿತಿ ಗಣೇಶ ಉತ್ಸವವನ್ನು ಫೆಬ್ರುವರಿಗೆ ಮುಂದೂಡಿದೆ ಎಂದು ಟ್ರಸ್ಟಿ ಮುಕುಂದ ಕಾಮತ್ ತಿಳಿಸಿದ್ದಾರೆ. ವಡಾಲಾ ಮಠದಲ್ಲಿ 10 ದಿನಗಳ ಕಾಲ ನಡೆಯುವ ಉತ್ಸವಕ್ಕೆ ಸಾವಿರಾರು ಮಂದಿ ದರ್ಶನ ಪಡೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಕೋವಿಡ್–19 ಪಿಡುಗು ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಗಣೇಶೋತ್ಸವವನ್ನು ಯಾವ ರೀತಿ ಆಯೋಜನೆ ಮಾಡಬಹುದು ಎಂಬುದನ್ನು ಚರ್ಚಿಸಲು ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್ ಅವರು ನಗರದ ಗಣೇಶ ಮಂಡಳಗಳ ಜೊತೆ ಸಭೆ ನಡೆಸಿದರು.</p>.<p>ಮುಂಬೈನಲ್ಲಿ ಸಾವಿರಾರು ಗಣೇಶ ಮಂಡಳಗಳು ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತವೆ. ಈ ಬಾರಿ 10 ದಿನಗಳ ಉತ್ಸವ ಆಗಸ್ಟ್ 22 ರಂದು ಆರಂಭವಾಗಲಿದೆ.</p>.<p>ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು. ಮಹಾರಾಷ್ಟ್ರ ಸರ್ಕಾರದ ಎಲ್ಲ ಆದೇಶಗಳನ್ನು ಪಾಲಿಸುವುದಾಗಿ ಮಂಡಳಗಳ ಮುಖ್ಯಸ್ಥರು ಭರವಸೆ ನೀಡಿದರು.</p>.<p>ಸರ್ಕಾರ ಸೂಚನೆ ನೀಡಿದರೆ ಈ ವರ್ಷ ಗಣೇಶೋತ್ಸವವನ್ನು ಆಚರಿಸುವುದಿಲ್ಲ. ಸದ್ಯ ತಲೆದೋರಿರುವ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸ್ವಾಸ್ಥ್ಯ ಮುಖ್ಯ ಎಂದು ಗಣೇಶ ಗಲ್ಲಿ ಮಂಡಳ ಕಾರ್ಯದರ್ಶಿ ಸ್ವಪ್ನಿಲ್ ಪರಬ್ ತಿಳಿಸಿದರು.</p>.<p><strong>ಮುಂದೂಡಿಕೆ: </strong>ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಡಾಲಾದಲ್ಲಿ ಜಿಎಸ್ಬಿ ಗಣೇಶೋತ್ಸವ ಸಮಿತಿ ಗಣೇಶ ಉತ್ಸವವನ್ನು ಫೆಬ್ರುವರಿಗೆ ಮುಂದೂಡಿದೆ ಎಂದು ಟ್ರಸ್ಟಿ ಮುಕುಂದ ಕಾಮತ್ ತಿಳಿಸಿದ್ದಾರೆ. ವಡಾಲಾ ಮಠದಲ್ಲಿ 10 ದಿನಗಳ ಕಾಲ ನಡೆಯುವ ಉತ್ಸವಕ್ಕೆ ಸಾವಿರಾರು ಮಂದಿ ದರ್ಶನ ಪಡೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>