ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮುಷರಫ್ ಪ್ರಾಮಾಣಿಕ ಯತ್ನ: ಮೆಹಬೂಬಾ

Last Updated 5 ಫೆಬ್ರುವರಿ 2023, 12:59 IST
ಅಕ್ಷರ ಗಾತ್ರ

ಶ್ರೀನಗರ: ಪಾಕಿಸ್ತಾನದ ಮಾಜಿ ಅಧ್ಯಕ್ಷ, ನಿವೃತ್ತ ಜನರಲ್‌ ಪರ್ವೇಜ್ ಮುಷರಫ್‌ ಅವರ ನಿಧನಕ್ಕೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸಂತಾಪ ಸೂಚಿಸಿದ್ದಾರೆ.

ಮುಷರಫ್ ಅವರು ಕಾಶ್ಮೀರದ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದ ಪಾಕಿಸ್ತಾನದ ಏಕ ಮಾತ್ರ ಜನರಲ್ ಎಂದು ಮೆಹಬೂಬಾ ನೆನಪಿಸಿಕೊಂಡಿದ್ದಾರೆ.

79 ವರ್ಷದ ಮುಷರಫ್, ಭಾನುವಾರ ದುಬೈನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮುಷರಫ್ ಬಹುಶಃ ಕಾಶ್ಮೀರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ ಏಕೈಕ ಪಾಕಿಸ್ತಾನದ ಜನರಲ್ ಆಗಿದ್ದಾರೆ. ಅವರು ಭಾರತ-ಪಾಕಿಸ್ತಾನದ ಸ್ವೀಕಾರದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಜನರ ಬೇಡಿಕೆಗೆ ಅನುಗುಣವಾಗಿ ಪರಿಹಾರವನ್ನು ಬಯಸಿದ್ದರು ಎಂದು ಹೇಳಿದರು.

ಮುಷರಫ್ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಡುವಣ ಕದನ ವಿರಾಮ ಒಪ್ಪಂದವೂ ಈಗಲೂ ನೆಲೆನಿಂತಿದೆ ಎಂದು ಅವರು ಹೇಳಿದರು.

2001ರಿಂದ 2008ರವರೆಗೆ ಮುಷರಫ್ ಅವರು ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. 1999ರಲ್ಲಿ ಕಾರ್ಗಿಲ್ ಯುದ್ಧ ನಡೆದ ವೇಳೆ ಮುಷರಫ್ ಅವರೇ ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT