<p><strong>ಲಖನೌ</strong>: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಸದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್–ಇ–ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷ (ಎಐಎಂಐಎಂ) ಸ್ಪರ್ಧಿಸಲಿದೆ.ಅಲ್ಪಸಂಖ್ಯಾತರ ಮತಗಳ ಮೇಲೆ ಪ್ರಮುಖವಾಗಿ ಅವಲಂಬನೆ ಆಗಿರುವ ರಾಜಕೀಯ ಪಕ್ಷಗಳು ಇದರಿಂದಾಗಿ ಕಳವಳಕ್ಕೀಡಾಗಿವೆ ಎನ್ನಲಾಗಿದೆ.</p>.<p>ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಕ್ಷೇತ್ರಗಳಲ್ಲಿಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಎಐಎಂಐಎಂ ಈಗಾಗಲೇ ಘೋಷಿಸಿದೆ.</p>.<p>ಉತ್ತರ ಪ್ರದೇಶದ ಜಾಟವ, ಯಾದವ, ರಾಜ್ಭರ್, ನಿಶಾದ್ ಮುಂತಾದ ಸಣ್ಣ ಸಣ್ಣ ಸಮುದಾಯಗಳಿಗೆ ಅವೇ ಸಮುದಾಯಗಳ ನಾಯಕರು ಇದ್ದಾರೆ. ಆದರೆ ರಾಜ್ಯದಲ್ಲಿ ಶೇ 19ರಷ್ಟು ಜನಸಂಖ್ಯೆ ಇರುವ ಮುಸ್ಲಿಮರಲ್ಲಿ ಏಕೀಕೃತ ನಾಯಕತ್ವ ಇಲ್ಲ. ಸಮಾಜ<br />ವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಕೈ ಕೆಳಗೆ ಮುಸ್ಲಿಮರು ಗುಲಾಮಗಿರಿ ಮಾಡಿದ್ದು ಸಾಕು. ಆ ಪಕ್ಷಗಳು ಮುಸ್ಲಿಮರನ್ನು ಕೇವಲ ಮತ ಬ್ಯಾಂಕ್ಗಳನ್ನಾಗಿ ಬಳಸಿಕೊಂಡಿವೆ ಎಂದು ಎಐಎಂಐಎಂ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.</p>.<p>ಸುಮಾರು 82 ವಿಧಾನಸಭೆ ಕ್ಷೇತ್ರಗಳಲ್ಲಿ ಮುಸ್ಲಿಮರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.</p>.<p>ಒವೈಸಿ ಅವರು ಉತ್ತರ ಪ್ರದೇಶದ ಅಯೋಧ್ಯೆಯಿಂದ ಕಳೆದ ತಿಂಗಳು ಪ್ರಚಾರ ಕಾರ್ಯ ಆರಂಭಿಸಿದ್ದಾರೆ.</p>.<p>ಮುಸ್ಲಿಂ ಸಮುದಾಯದ ಉನ್ನತಿಗಾಗಿ ಮುಸ್ಲಿಮರಲ್ಲಿ ನಾಯಕತ್ವ ಹುಟ್ಟುಹಾಕುವ ಗುರಿಯನ್ನು ಎಐಎಂಐಎಂ ಹೊಂದಿದೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಕೂಡ ಒಬ್ಬ ಮುಸ್ಲಿಂ ನಾಯಕ ರೂಪುಗೊಳ್ಳಲು ಬಿಡು ವುದಿಲ್ಲ ಎಂದು ಪಕ್ಷದ ವಕ್ತಾರ ಸಯ್ಯದ್ ಆಸಿಂ ವಾಖರ್ ಹೇಳಿದ್ದಾರೆ.</p>.<p>ಆದರೆ, ಎಐಎಂಐಎಂ ಕ್ರಮವನ್ನು ಎಸ್ಪಿ, ಬಿಎಸ್ಪಿ ಖಂಡಿಸಿವೆ. ಮುಸ್ಲಿಂ ಮತಗಳನ್ನು ವಿಭಜಿಸಿ ಬಿಜೆಪಿಗೆ ನೆರವಾಗಲು ಒವೈಸಿ ನಡೆಸಿರುವ ಹುನ್ನಾರ ಇದಾಗಿದೆ ಎಂದಿವೆ.</p>.<p>‘ಬಿಜೆಪಿ ಪರವಾಗಿ ಎಸ್ಪಿಯ ಮತಗಳನ್ನು ವಿಭಜಿಸಲು ಒವೈಸಿ ಪ್ರಯತ್ನಿಸುತ್ತಿದ್ದಾರೆ. ಅವರೊಬ್ಬ ಮತ ವಿಭಜಕ’ ಎಂದು ಎಸ್ಪಿ ನಾಯಕ ಅಬು ಆಜ್ಮಿ ಹೇಳಿದ್ದಾರೆ.</p>.<p>‘ಹಿಂದುತ್ವ ರಾಜಕೀಯ ಗಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಮರು ತಮಗೆ ಪ್ರತ್ಯೇಕ ನಾಯಕತ್ವದ ಅಗತ್ಯವಿದೆ ಎಂದು ತಿಳಿದಿದ್ದಾರೆ. ಆದ್ದರಿಂದ ಈ ಬಾರಿ ಒವೈಸಿ ಅವರ ಲೆಕ್ಕಾಚಾರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡುವುದು ಖಚಿತ’ ಎಂದು ರಾಜಕೀಯ ವಿಶ್ಲೇಷಕ ಪರ್ವೇಜ್ ಅಹ್ಮದ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಸದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್–ಇ–ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷ (ಎಐಎಂಐಎಂ) ಸ್ಪರ್ಧಿಸಲಿದೆ.ಅಲ್ಪಸಂಖ್ಯಾತರ ಮತಗಳ ಮೇಲೆ ಪ್ರಮುಖವಾಗಿ ಅವಲಂಬನೆ ಆಗಿರುವ ರಾಜಕೀಯ ಪಕ್ಷಗಳು ಇದರಿಂದಾಗಿ ಕಳವಳಕ್ಕೀಡಾಗಿವೆ ಎನ್ನಲಾಗಿದೆ.</p>.<p>ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಕ್ಷೇತ್ರಗಳಲ್ಲಿಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಎಐಎಂಐಎಂ ಈಗಾಗಲೇ ಘೋಷಿಸಿದೆ.</p>.<p>ಉತ್ತರ ಪ್ರದೇಶದ ಜಾಟವ, ಯಾದವ, ರಾಜ್ಭರ್, ನಿಶಾದ್ ಮುಂತಾದ ಸಣ್ಣ ಸಣ್ಣ ಸಮುದಾಯಗಳಿಗೆ ಅವೇ ಸಮುದಾಯಗಳ ನಾಯಕರು ಇದ್ದಾರೆ. ಆದರೆ ರಾಜ್ಯದಲ್ಲಿ ಶೇ 19ರಷ್ಟು ಜನಸಂಖ್ಯೆ ಇರುವ ಮುಸ್ಲಿಮರಲ್ಲಿ ಏಕೀಕೃತ ನಾಯಕತ್ವ ಇಲ್ಲ. ಸಮಾಜ<br />ವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಕೈ ಕೆಳಗೆ ಮುಸ್ಲಿಮರು ಗುಲಾಮಗಿರಿ ಮಾಡಿದ್ದು ಸಾಕು. ಆ ಪಕ್ಷಗಳು ಮುಸ್ಲಿಮರನ್ನು ಕೇವಲ ಮತ ಬ್ಯಾಂಕ್ಗಳನ್ನಾಗಿ ಬಳಸಿಕೊಂಡಿವೆ ಎಂದು ಎಐಎಂಐಎಂ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.</p>.<p>ಸುಮಾರು 82 ವಿಧಾನಸಭೆ ಕ್ಷೇತ್ರಗಳಲ್ಲಿ ಮುಸ್ಲಿಮರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.</p>.<p>ಒವೈಸಿ ಅವರು ಉತ್ತರ ಪ್ರದೇಶದ ಅಯೋಧ್ಯೆಯಿಂದ ಕಳೆದ ತಿಂಗಳು ಪ್ರಚಾರ ಕಾರ್ಯ ಆರಂಭಿಸಿದ್ದಾರೆ.</p>.<p>ಮುಸ್ಲಿಂ ಸಮುದಾಯದ ಉನ್ನತಿಗಾಗಿ ಮುಸ್ಲಿಮರಲ್ಲಿ ನಾಯಕತ್ವ ಹುಟ್ಟುಹಾಕುವ ಗುರಿಯನ್ನು ಎಐಎಂಐಎಂ ಹೊಂದಿದೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಕೂಡ ಒಬ್ಬ ಮುಸ್ಲಿಂ ನಾಯಕ ರೂಪುಗೊಳ್ಳಲು ಬಿಡು ವುದಿಲ್ಲ ಎಂದು ಪಕ್ಷದ ವಕ್ತಾರ ಸಯ್ಯದ್ ಆಸಿಂ ವಾಖರ್ ಹೇಳಿದ್ದಾರೆ.</p>.<p>ಆದರೆ, ಎಐಎಂಐಎಂ ಕ್ರಮವನ್ನು ಎಸ್ಪಿ, ಬಿಎಸ್ಪಿ ಖಂಡಿಸಿವೆ. ಮುಸ್ಲಿಂ ಮತಗಳನ್ನು ವಿಭಜಿಸಿ ಬಿಜೆಪಿಗೆ ನೆರವಾಗಲು ಒವೈಸಿ ನಡೆಸಿರುವ ಹುನ್ನಾರ ಇದಾಗಿದೆ ಎಂದಿವೆ.</p>.<p>‘ಬಿಜೆಪಿ ಪರವಾಗಿ ಎಸ್ಪಿಯ ಮತಗಳನ್ನು ವಿಭಜಿಸಲು ಒವೈಸಿ ಪ್ರಯತ್ನಿಸುತ್ತಿದ್ದಾರೆ. ಅವರೊಬ್ಬ ಮತ ವಿಭಜಕ’ ಎಂದು ಎಸ್ಪಿ ನಾಯಕ ಅಬು ಆಜ್ಮಿ ಹೇಳಿದ್ದಾರೆ.</p>.<p>‘ಹಿಂದುತ್ವ ರಾಜಕೀಯ ಗಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಮರು ತಮಗೆ ಪ್ರತ್ಯೇಕ ನಾಯಕತ್ವದ ಅಗತ್ಯವಿದೆ ಎಂದು ತಿಳಿದಿದ್ದಾರೆ. ಆದ್ದರಿಂದ ಈ ಬಾರಿ ಒವೈಸಿ ಅವರ ಲೆಕ್ಕಾಚಾರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡುವುದು ಖಚಿತ’ ಎಂದು ರಾಜಕೀಯ ವಿಶ್ಲೇಷಕ ಪರ್ವೇಜ್ ಅಹ್ಮದ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>