<p><strong>ನಾರಾಯಣಪುರ:</strong> ಕ್ರೈಸ್ತ ಸನ್ಯಾಸಿನಿಯರು ಬಂಧನಕ್ಕೀಡಾಗಲು ಕಾರಣವಾದ ಮತಾಂತರ ಪ್ರಕರಣದ ಸಂತ್ರಸ್ತೆಯು ತಾನು ನೀಡಿದ ಹೇಳಿಕೆ ತನ್ನದಲ್ಲ, ಆ ಸುಳ್ಳು ಹೇಳಿಕೆ ನೀಡುವಂತೆ ಬಜರಂಗದಳದ ಕಾರ್ಯಕರ್ತರು ಒತ್ತಾಯಿಸಿ ಹಲ್ಲೆ ನಡೆಸಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಸಂತ್ರಸ್ತೆಯನ್ನು ಕಮಲೇಶ್ವರಿ ಪ್ರಧಾನ್ (21) ಎಂದು ಗುರುತಿಸಲಾಗಿದೆ. </p><p>‘ನಾನು ನಾಲ್ಕು ವರ್ಷಗಳಿಂದ ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದೇನೆ. ನನ್ನ ಕುಟುಂಬದ ಸಹಮತದೊಂದಿಗೆ ಕ್ರೈಸ್ತ ಸನ್ಯಾಸಿನಿಯರ ಜತೆಗೆ ತೆರಳುತ್ತಿದ್ದೆ. ಆದರೆ, ಬಜರಂಗದಳದ ಕಾರ್ಯಕರ್ತರು ನನ್ನನ್ನು ಬೆದರಿಸಿ, ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎನ್ನುವಂತ ಹೇಳಿಕೆ ಕೊಡಿಸಿದರು. ಪೊಲೀಸರು ಕೂಡ ನನ್ನ ಹೇಳಿಕೆಯನ್ನು ಸರಿಯಾಗಿ ದಾಖಲಿಸಿಕೊಂಡಿಲ್ಲ.</p><p>ಬಂಧನಕ್ಕೀಡಾಗಿರುವ ಕ್ರೈಸ್ತ ಸನ್ಯಾಸಿನಿಯರು ಹಾಗೂ ಮತ್ತೊಬ್ಬ ವ್ಯಕ್ತಿ ಅಮಾಯಕರು ಅವರನ್ನು <br>ಬಿಡುಗಡೆಗೊಳಿಸಬೇಕು’ ಎಂದು ಕಮಲೇಶ್ವರಿ ಆಗ್ರಹಿಸಿದ್ದಾರೆ.</p><p>ಬಜರಂಗದಳ ದುರ್ಗ ಘಟಕದ ಸಂಯೋಜಕ ರವಿ ನಿಗಮ್ ಅವರು ಸಂತ್ರಸ್ತೆಯ ಆರೋಪವನ್ನು ತಳ್ಳಿಹಾಕಿದ್ದು, ನಾವು ಯಾರ ಮೇಲೂ ಹಲ್ಲೆ ನಡೆಸಿ, ಬಲವಂತ ಮಾಡಿಲ್ಲ. ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿ ಪರಿಶೀಲಿಸಿದರೆ, ಸತ್ಯ ಹೊರಬರುತ್ತದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾರಾಯಣಪುರ:</strong> ಕ್ರೈಸ್ತ ಸನ್ಯಾಸಿನಿಯರು ಬಂಧನಕ್ಕೀಡಾಗಲು ಕಾರಣವಾದ ಮತಾಂತರ ಪ್ರಕರಣದ ಸಂತ್ರಸ್ತೆಯು ತಾನು ನೀಡಿದ ಹೇಳಿಕೆ ತನ್ನದಲ್ಲ, ಆ ಸುಳ್ಳು ಹೇಳಿಕೆ ನೀಡುವಂತೆ ಬಜರಂಗದಳದ ಕಾರ್ಯಕರ್ತರು ಒತ್ತಾಯಿಸಿ ಹಲ್ಲೆ ನಡೆಸಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಸಂತ್ರಸ್ತೆಯನ್ನು ಕಮಲೇಶ್ವರಿ ಪ್ರಧಾನ್ (21) ಎಂದು ಗುರುತಿಸಲಾಗಿದೆ. </p><p>‘ನಾನು ನಾಲ್ಕು ವರ್ಷಗಳಿಂದ ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದೇನೆ. ನನ್ನ ಕುಟುಂಬದ ಸಹಮತದೊಂದಿಗೆ ಕ್ರೈಸ್ತ ಸನ್ಯಾಸಿನಿಯರ ಜತೆಗೆ ತೆರಳುತ್ತಿದ್ದೆ. ಆದರೆ, ಬಜರಂಗದಳದ ಕಾರ್ಯಕರ್ತರು ನನ್ನನ್ನು ಬೆದರಿಸಿ, ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎನ್ನುವಂತ ಹೇಳಿಕೆ ಕೊಡಿಸಿದರು. ಪೊಲೀಸರು ಕೂಡ ನನ್ನ ಹೇಳಿಕೆಯನ್ನು ಸರಿಯಾಗಿ ದಾಖಲಿಸಿಕೊಂಡಿಲ್ಲ.</p><p>ಬಂಧನಕ್ಕೀಡಾಗಿರುವ ಕ್ರೈಸ್ತ ಸನ್ಯಾಸಿನಿಯರು ಹಾಗೂ ಮತ್ತೊಬ್ಬ ವ್ಯಕ್ತಿ ಅಮಾಯಕರು ಅವರನ್ನು <br>ಬಿಡುಗಡೆಗೊಳಿಸಬೇಕು’ ಎಂದು ಕಮಲೇಶ್ವರಿ ಆಗ್ರಹಿಸಿದ್ದಾರೆ.</p><p>ಬಜರಂಗದಳ ದುರ್ಗ ಘಟಕದ ಸಂಯೋಜಕ ರವಿ ನಿಗಮ್ ಅವರು ಸಂತ್ರಸ್ತೆಯ ಆರೋಪವನ್ನು ತಳ್ಳಿಹಾಕಿದ್ದು, ನಾವು ಯಾರ ಮೇಲೂ ಹಲ್ಲೆ ನಡೆಸಿ, ಬಲವಂತ ಮಾಡಿಲ್ಲ. ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿ ಪರಿಶೀಲಿಸಿದರೆ, ಸತ್ಯ ಹೊರಬರುತ್ತದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>