ರಿಚರ್ಡ್ ಅಟೆನ್ಬರೊ ಅವರು 1982ರಲ್ಲಿ ‘ಗಾಂಧಿ’ ಚಲನಚಿತ್ರ ನಿರ್ಮಿಸುವವರೆಗೂ ಜಗತ್ತಿಗೆ ಮಹಾತ್ಮ ಗಾಂಧಿ ಕುರಿತು ಅರಿವು ಇರಲಿಲ್ಲ ಎಂದು ಸುಳ್ಳು ಹೇಳಿದ ಮೋದಿ ಅವರು, ವಾರಾಣಸಿ, ಅಹಮದಾಬಾದ್ ಮತ್ತು ಇತರೆಡೆಗಳಲ್ಲಿ ಗಾಂಧಿವಾದಿ ಸಂಸ್ಥೆಗಳನ್ನು ಕೆಡವಿ, ನಾಶಪಡಿಸಿದ್ದಾರೆ. ಅಲ್ಲದೆ ಸಂಸತ್ ಭವನದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಒಂದಲ್ಲ, ಎರಡು ಬಾರಿ ಸ್ಥಳಾಂತರಿಸಿದ್ದಾರೆ. ಇನ್ನು ಮಹಾತ್ಮ ಗಾಂಧಿ ಅವರ ಹಂತಕ ನಾಥೂರಾಂ ಗೋಡ್ಸೆಯನ್ನು ನಾಯಕ ಎಂದು ಬಿಂಬಿಸುವ ತನ್ನ ಸಹೋದ್ಯೋಗಿಗಳ ವಿರುದ್ಧ ಅವರು ಚಕಾರ ಎತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.