<p><strong>ಗುವಾಹಟಿ</strong>: ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಗೆ ನಿರ್ಮಿಸಿರುವ 6 ಪಥಗಳ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.</p>.<p>‘ಕುಮಾರ ಭಾಸ್ಕರ ವರ್ಮ ಸೇತು’ ಎಂದು ಕರೆಯಲಾಗುವ ಈ ಸೇತುವೆಯನ್ನು ₹3,030 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.</p>.<p>ಇದು ಗುವಾಹಟಿ ಹಾಗೂ ಉತ್ತರ ಗುವಾಹಟಿಯನ್ನು ಸಂಪರ್ಕಿಸುತ್ತದೆ. ಪ್ರಸ್ತುತ, ಸರೈಘಾಟ್ ಸೇತುವೆ ಮೂಲಕ ಸಂಪರ್ಕ ಇದ್ದು, ಪ್ರಯಾಣಕ್ಕೆ ಅಂದಾಜು 30 ನಿಮಿಷ ತೆಗೆದುಕೊಳ್ಳುತ್ತದೆ. ನೂತನ ಸೇತುವೆಯಿಂದಾಗಿ ಪ್ರಯಾಣದ ಅವಧಿ 7 ನಿಮಿಷಕ್ಕೆ ಇಳಿಯಲಿದೆ.</p>.<p>ನಂತರ, ಲಾಚಿತ್ ಘಾಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಐಎಂ–ಗುವಾಹಟಿಯ ತಾತ್ಕಾಲಿಕ ಕ್ಯಾಂಪಸ್, ನ್ಯಾಷನಲ್ ಡೇಟಾ ಸೆಂಟರ್ ಅನ್ನು ಮೋದಿ ಅವರು ವರ್ಚುವಲ್ ಆಗಿ ಉದ್ಘಾಟಿಸಿದರು.</p>.<p>ಗುವಾಹಟಿ ಸೇರಿ ದೇಶದ ನಾಲ್ಕು ನಗರಗಳಿಗೆ 225 ಎಲೆಕ್ಟ್ರಿಕ್ ಬಸ್ಗಳ ಸಂಚಾರಕ್ಕೆ ಕೂಡ ಇದೇ ವೇಳೆ ಹಸಿರು ನಿಶಾನೆ ತೋರಿದರು. ಗುವಾಹಟಿಗೆ 100 ಬಸ್, ನಾಗ್ಪುರ ಹಾಗೂ ಭಾವನಗರಕ್ಕೆ ತಲಾ 50 ಹಾಗೂ ಚಂಡೀಗಢಕ್ಕೆ 25 ಬಸ್ಗಳ ಹಂಚಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ</strong>: ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಗೆ ನಿರ್ಮಿಸಿರುವ 6 ಪಥಗಳ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.</p>.<p>‘ಕುಮಾರ ಭಾಸ್ಕರ ವರ್ಮ ಸೇತು’ ಎಂದು ಕರೆಯಲಾಗುವ ಈ ಸೇತುವೆಯನ್ನು ₹3,030 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.</p>.<p>ಇದು ಗುವಾಹಟಿ ಹಾಗೂ ಉತ್ತರ ಗುವಾಹಟಿಯನ್ನು ಸಂಪರ್ಕಿಸುತ್ತದೆ. ಪ್ರಸ್ತುತ, ಸರೈಘಾಟ್ ಸೇತುವೆ ಮೂಲಕ ಸಂಪರ್ಕ ಇದ್ದು, ಪ್ರಯಾಣಕ್ಕೆ ಅಂದಾಜು 30 ನಿಮಿಷ ತೆಗೆದುಕೊಳ್ಳುತ್ತದೆ. ನೂತನ ಸೇತುವೆಯಿಂದಾಗಿ ಪ್ರಯಾಣದ ಅವಧಿ 7 ನಿಮಿಷಕ್ಕೆ ಇಳಿಯಲಿದೆ.</p>.<p>ನಂತರ, ಲಾಚಿತ್ ಘಾಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಐಎಂ–ಗುವಾಹಟಿಯ ತಾತ್ಕಾಲಿಕ ಕ್ಯಾಂಪಸ್, ನ್ಯಾಷನಲ್ ಡೇಟಾ ಸೆಂಟರ್ ಅನ್ನು ಮೋದಿ ಅವರು ವರ್ಚುವಲ್ ಆಗಿ ಉದ್ಘಾಟಿಸಿದರು.</p>.<p>ಗುವಾಹಟಿ ಸೇರಿ ದೇಶದ ನಾಲ್ಕು ನಗರಗಳಿಗೆ 225 ಎಲೆಕ್ಟ್ರಿಕ್ ಬಸ್ಗಳ ಸಂಚಾರಕ್ಕೆ ಕೂಡ ಇದೇ ವೇಳೆ ಹಸಿರು ನಿಶಾನೆ ತೋರಿದರು. ಗುವಾಹಟಿಗೆ 100 ಬಸ್, ನಾಗ್ಪುರ ಹಾಗೂ ಭಾವನಗರಕ್ಕೆ ತಲಾ 50 ಹಾಗೂ ಚಂಡೀಗಢಕ್ಕೆ 25 ಬಸ್ಗಳ ಹಂಚಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>