<p><strong>ನವದೆಹಲಿ</strong>: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಮಾರು ₹11,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಎರಡು ಪ್ರಮುಖ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು. </p><p>ದ್ವಾರಕಾ ಎಕ್ಸ್ಪ್ರೆಸ್ವೇಯ ದೆಹಲಿ ವಿಭಾಗ ಮತ್ತು ನಗರ ವಿಸ್ತರಣಾ ರಸ್ತೆ-2ರ ಒಂದು ಭಾಗವನ್ನು ಅವರು ಉದ್ಘಾಟಿಸಿದ್ದು, ಇದು ರಾಜಧಾನಿಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪ್ರಯಾಣವನ್ನು ವೇಗಗೊಳಿಸಲು ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿದೆ ಎಂದು ವರದಿ ತಿಳಿಸಿದೆ.</p><p>ಬಹುನಿರೀಕ್ಷಿತ ಹೆದ್ದಾರಿಗಳನ್ನು ಉದ್ಘಾಟಿಸುವ ಮೊದಲು, ಪ್ರಧಾನಿ ಮೋದಿ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಮೆಗಾ ರೋಡ್ಶೋ ನಡೆಸಿದರು.</p><p>‘ಈ ಯೋಜನೆಗಳು ಜನರ ಜೀವನವನ್ನು ಸುಧಾರಿಸುವ ಮತ್ತು ಸುಗಮ ಚಲನಶೀಲತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ರೂಪಿಸುವ ಪ್ರಧಾನಿ ಮೋದಿಯವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ’ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.</p><p>ಹೊಸ ಯೋಜನೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದ ಬಳಿಕ ಹರಿಯಾಣದ ಸೋನಿಪತ್, ರೋಹ್ತಕ್, ಬಹದ್ದೂರ್ಗಢ ಹಾಗೂ ಗುರುಗ್ರಾಮದಿಂದ ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ನಡುವಿನ ಪ್ರಯಾಣದ ಸಮಯ ಕಡಿತಗೊಳ್ಳಲಿದೆ.</p><p>‘ದ್ವಾರಕಾ ಎಕ್ಸ್ಪ್ರೆಸ್ವೇ ಹಾಗೂ ಯುಇಆರ್–2ರಿಂದ ರಾಷ್ಟ್ರ ರಾಜಧಾನಿ ದೆಹಲಿಯ ನಾಗರಿಕರಿಗೆ ನೆರವಾಗಲಿದೆ. ದೆಹಲಿ ಜನರ ಸಂಕಷ್ಟವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಯೋಜನೆ ಉದ್ಘಾಟಿಸಿ ಪ್ರಧಾನಿ ಮೋದಿ ತಿಳಿಸಿದರು.</p><p>ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ‘ಎರಡು ಯೋಜನೆಗಳ ಜಾರಿಯಿಂದ ದೆಹಲಿಯಲ್ಲಿ ಸಂಚಾರ ದಟ್ಟಣೆಯು ಶೇಕಡಾ 50ರಷ್ಟು ಕಡಿಮೆಯಾಗಲಿದೆ’ ಎಂದು ತಿಳಿಸಿದರು.</p><p>ದೆಹಲಿ ವಿಭಾಗದ 10.1 ಕಿ.ಮೀ. ಉದ್ದದ ‘ದ್ವಾರಕಾ ಎಕ್ಸ್ಪ್ರೆಸ್ ವೇ’ ಅನ್ನು ₹5,360 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದ್ವಾರಕಾ ಎಕ್ಸ್ಪ್ರೆಸ್ವೇನ ಹರಿಯಾಣ ವಿಭಾಗದಲ್ಲಿರುವ 19 ಕಿ.ಮೀ. ದೂರವನ್ನು 2024ರ ಮಾರ್ಚ್ ತಿಂಗಳಲ್ಲಿ ಉದ್ಘಾಟಿಸಲಾಗಿತ್ತು.</p><p>ಆಲೀಪುರ್–ದಿಚಾವೊ ಕಲಾನ್ ನಡುವಿನ ಯುಇಆರ್ ಎರಡನೇ ಭಾಗವನ್ನು ಇದೇ ವೇಳೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ದೆಹಲಿಯಿಂದ ಹರಿಯಾಣದ ಗಡಿಭಾಗವಾದ ಸೋನಿಪತ್, ಬಹಾದ್ದೂರ್ಗಢಕ್ಕೆ ನೇರ ಸಂಪರ್ಕ ಕಲ್ಪಿಸಲಿದ್ದು, ಒಟ್ಟು ₹5,580 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದೆಹಲಿಯ ಒಳ ಹಾಗೂ ಹೊರವರ್ತುಲ ರಸ್ತೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಿ, ಕೈಗಾರಿಕಾ ಪ್ರದೇಶಗಳನ್ನು ಕ್ಷಿಪ್ರವಾಗಿ ತಲುಪಲು ನೆರವಾಗಲಿದೆ. </p><p>ಹೆದ್ದಾರಿ ಉದ್ಘಾಟಿಸಿದ ಬಳಿಕ ಕಾರ್ಮಿಕರ ಜೊತೆಗೆ ಪ್ರಧಾನಿ ಮೋದಿ ಸಂಭಾಷಣೆ ನಡೆಸಿದರು. ಅಲ್ಲದೇ, ಮುಂಡ್ಕ–ಬಕ್ಕರ್ವಾಲಾ ಗ್ರಾಮದ ಟೋಲ್ ಪ್ಲಾಜಾದರೆಗೂ ರೋಡ್ ಶೋ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಮಾರು ₹11,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಎರಡು ಪ್ರಮುಖ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು. </p><p>ದ್ವಾರಕಾ ಎಕ್ಸ್ಪ್ರೆಸ್ವೇಯ ದೆಹಲಿ ವಿಭಾಗ ಮತ್ತು ನಗರ ವಿಸ್ತರಣಾ ರಸ್ತೆ-2ರ ಒಂದು ಭಾಗವನ್ನು ಅವರು ಉದ್ಘಾಟಿಸಿದ್ದು, ಇದು ರಾಜಧಾನಿಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪ್ರಯಾಣವನ್ನು ವೇಗಗೊಳಿಸಲು ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿದೆ ಎಂದು ವರದಿ ತಿಳಿಸಿದೆ.</p><p>ಬಹುನಿರೀಕ್ಷಿತ ಹೆದ್ದಾರಿಗಳನ್ನು ಉದ್ಘಾಟಿಸುವ ಮೊದಲು, ಪ್ರಧಾನಿ ಮೋದಿ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಮೆಗಾ ರೋಡ್ಶೋ ನಡೆಸಿದರು.</p><p>‘ಈ ಯೋಜನೆಗಳು ಜನರ ಜೀವನವನ್ನು ಸುಧಾರಿಸುವ ಮತ್ತು ಸುಗಮ ಚಲನಶೀಲತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ರೂಪಿಸುವ ಪ್ರಧಾನಿ ಮೋದಿಯವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ’ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.</p><p>ಹೊಸ ಯೋಜನೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದ ಬಳಿಕ ಹರಿಯಾಣದ ಸೋನಿಪತ್, ರೋಹ್ತಕ್, ಬಹದ್ದೂರ್ಗಢ ಹಾಗೂ ಗುರುಗ್ರಾಮದಿಂದ ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ನಡುವಿನ ಪ್ರಯಾಣದ ಸಮಯ ಕಡಿತಗೊಳ್ಳಲಿದೆ.</p><p>‘ದ್ವಾರಕಾ ಎಕ್ಸ್ಪ್ರೆಸ್ವೇ ಹಾಗೂ ಯುಇಆರ್–2ರಿಂದ ರಾಷ್ಟ್ರ ರಾಜಧಾನಿ ದೆಹಲಿಯ ನಾಗರಿಕರಿಗೆ ನೆರವಾಗಲಿದೆ. ದೆಹಲಿ ಜನರ ಸಂಕಷ್ಟವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಯೋಜನೆ ಉದ್ಘಾಟಿಸಿ ಪ್ರಧಾನಿ ಮೋದಿ ತಿಳಿಸಿದರು.</p><p>ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ‘ಎರಡು ಯೋಜನೆಗಳ ಜಾರಿಯಿಂದ ದೆಹಲಿಯಲ್ಲಿ ಸಂಚಾರ ದಟ್ಟಣೆಯು ಶೇಕಡಾ 50ರಷ್ಟು ಕಡಿಮೆಯಾಗಲಿದೆ’ ಎಂದು ತಿಳಿಸಿದರು.</p><p>ದೆಹಲಿ ವಿಭಾಗದ 10.1 ಕಿ.ಮೀ. ಉದ್ದದ ‘ದ್ವಾರಕಾ ಎಕ್ಸ್ಪ್ರೆಸ್ ವೇ’ ಅನ್ನು ₹5,360 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದ್ವಾರಕಾ ಎಕ್ಸ್ಪ್ರೆಸ್ವೇನ ಹರಿಯಾಣ ವಿಭಾಗದಲ್ಲಿರುವ 19 ಕಿ.ಮೀ. ದೂರವನ್ನು 2024ರ ಮಾರ್ಚ್ ತಿಂಗಳಲ್ಲಿ ಉದ್ಘಾಟಿಸಲಾಗಿತ್ತು.</p><p>ಆಲೀಪುರ್–ದಿಚಾವೊ ಕಲಾನ್ ನಡುವಿನ ಯುಇಆರ್ ಎರಡನೇ ಭಾಗವನ್ನು ಇದೇ ವೇಳೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ದೆಹಲಿಯಿಂದ ಹರಿಯಾಣದ ಗಡಿಭಾಗವಾದ ಸೋನಿಪತ್, ಬಹಾದ್ದೂರ್ಗಢಕ್ಕೆ ನೇರ ಸಂಪರ್ಕ ಕಲ್ಪಿಸಲಿದ್ದು, ಒಟ್ಟು ₹5,580 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದೆಹಲಿಯ ಒಳ ಹಾಗೂ ಹೊರವರ್ತುಲ ರಸ್ತೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಿ, ಕೈಗಾರಿಕಾ ಪ್ರದೇಶಗಳನ್ನು ಕ್ಷಿಪ್ರವಾಗಿ ತಲುಪಲು ನೆರವಾಗಲಿದೆ. </p><p>ಹೆದ್ದಾರಿ ಉದ್ಘಾಟಿಸಿದ ಬಳಿಕ ಕಾರ್ಮಿಕರ ಜೊತೆಗೆ ಪ್ರಧಾನಿ ಮೋದಿ ಸಂಭಾಷಣೆ ನಡೆಸಿದರು. ಅಲ್ಲದೇ, ಮುಂಡ್ಕ–ಬಕ್ಕರ್ವಾಲಾ ಗ್ರಾಮದ ಟೋಲ್ ಪ್ಲಾಜಾದರೆಗೂ ರೋಡ್ ಶೋ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>