ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ವೈವಿಧ್ಯ ನಿರ್ವಹಣಾ ಸಮಿತಿ ರಚನೆ: ಅವಧಿ ವಿಸ್ತರಿಸಿದ ಎನ್‌ಜಿಟಿ

Last Updated 19 ಡಿಸೆಂಬರ್ 2020, 10:28 IST
ಅಕ್ಷರ ಗಾತ್ರ

ನವದೆಹಲಿ: ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳು (ಬಿಎಂಸಿ) ಹಾಗೂ ಜನರ ಜೀವವೈವಿಧ್ಯ ರಿಜಿಸ್ಟ್ರಿ (ಪಿಬಿಆರ್‌) ರಚನೆಗೆ ನೀಡಿದ್ದ ಅವಧಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಿಸ್ತರಿಸಿದೆ.

ಕೋವಿಡ್‌–19 ಪಿಡುಗಿನ ಕಾರಣ ಅವಧಿಯನ್ನು ವಿಸ್ತರಿಸಲಾಗಿದೆ ನ್ಯಾಯಮಂಡಳಿ ಹೇಳಿದೆ.

ಜೀವ ವೈವಿಧ್ಯ ಕಾಯ್ದೆ, 2002ರ ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಕೋರಿ ಪುಣೆ ಮೂಲದ ಚಂದ್ರಭಾಲ್‌ ಸಿಂಗ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ನ್ಯಾಯಪೀಠ ನಡೆಸಿತು.

‘ದೇಶವೇ ಕೋವಿಡ್‌–19 ವಿರುದ್ಧ ಹೋರಾಡುತ್ತಿದೆ. ಹೀಗಾಗಿ ಬಿಎಂಸಿ, ಪಿಬಿಆರ್‌ಗಳ ರಚನೆಯಲ್ಲಿ ವಿಳಂಬವಾಗಿದೆ. ಅದೇ ರೀತಿ ಜೀವವೈವಿಧ್ಯ ನಿಯಮಗಳ ಪಾಲನೆಗೆ ನೀಡಿದ್ದ ಅವಧಿಯನ್ನು 2021ರ ಜೂನ್‌ 30ರ ವರೆಗೆ ವಿಸ್ತರಿಸಲಾಗಿದೆ. ಈ ಅವಧಿಯೊಳಗೆ ನಿಯಮ ಪಾಲನೆ ಮಾಡಿದ್ದೇ ಆದಲ್ಲಿ, ನಿಯಮಗಳ ಉಲ್ಲಂಘನೆಗಾಗಿ ನೀಡಬೇಕಿದ್ದ ಪರಿಹಾರವನ್ನು ಮನ್ನಾ ಮಾಡಲಾಗುವುದು’ ಎಂದೂ ನ್ಯಾಯಪೀಠ ಹೇಳಿತು.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಬಿಎಂಸಿ, ಪಿಬಿಆರ್‌ಗಳ ರಚನೆ ಸಾಧ್ಯವಾಗಿಲ್ಲ. ಇದಕ್ಕಾಗಿ ಸಮಯ ನೀಡಬೇಕು. ನಿಯಮಗಳ ಉಲ್ಲಂಘನೆಗಾಗಿ ಪಾವತಿಸಬೇಕಾಗಿರುವ ಪರಿಹಾರವನ್ನು ಸಹ ಮನ್ನಾ ಮಾಡುವಂತೆ ಕೆಲವು ರಾಜ್ಯಗಳು ಮನವಿ ಮಾಡಿದ್ದವು. ನ್ಯಾಯಪೀಠ ಈ ಮನವಿಯನ್ನು ಪುರಸ್ಕರಿಸಿ ಆದೇಶ ಹೊರಡಿಸಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT