‘ತನಿಖೆ ಸಂದರ್ಭದಲ್ಲಿ ಆರೋಪಿಗಳು ಹಾಗೂ ಇತರೆ ಗಲಭೆಕೋರರು ಫೆಬ್ರುವರಿ 25 ಮತ್ತು 26ರ ರಾತ್ರಿ ಗಂಗಾ ವಿಹಾರ್, ಭಗೀರತಿ ವಿಹಾರ್ ಪ್ರದೇಶದಲ್ಲಿ 9 ಮುಸ್ಲಿಮರನ್ನು ಕೊಂದು, ಹಲವು ಜನರನ್ನು ಥಳಿಸಿದ್ದರು. ಈ ಆರೋಪಿಗಳು ಗಲಭೆಯಲ್ಲಿ ಸಕ್ರಿಯರಾಗಿದ್ದರು ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಜನರನ್ನು ನಿಲ್ಲಿಸಿ, ಅವರ ಹೆಸರು , ವಿಳಾಸ ಕೇಳಿಕೊಂಡು ಗುರುತಿನ ಚೀಟಿ ಪಡೆದು ‘ಜೈ ಶ್ರೀರಾಮ್’ ಎನ್ನಲು ಬಲವಂತ ಮಾಡುತ್ತಿದ್ದರು. ಈ ರೀತಿ ಹೇಳಲು ನಿರಾಕರಿಸಿದವರನ್ನು ಹಾಗೂ ಮುಸ್ಲಿಮರನ್ನು ಥಳಿಸಿ, ಚರಂಡಿಗೆ ಎಸೆದಿದ್ದರು’ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.