ಹೈದರಾಬಾದ್: ‘ರಾಜಕಾರಣಿಗಳು ಅಥವಾ ಉದ್ಯಮಿಗಳು ಅಥವಾ ಅಧಿಕಾರಿಗಳು ಮಾತ್ರವೇ ನಾಯಕರಲ್ಲ. ನಾಯಕರಾದವರು ಸುಸ್ಥಿರ ಸಮಾಜದ ಅಭಿವೃದ್ಧಿಗೆ ಮತ್ತು ವ್ಯಕ್ತಿಗತವಾದ ಪ್ರಗತಿಗೆ ದುಡಿಯುತ್ತಾರೆ. ಗುಣಮಟ್ಟದ ಶಿಕ್ಷಣದ ಮೂಲಕ ಆಧುನಿಕ ಭಾರತವನ್ನು ಕಟ್ಟುವಲ್ಲಿ ಯಶಸ್ವಿ ಸಂಸ್ಥೆಯು ಮುಂದಾಳುವಾಗಿದೆ’ ಎಂದು ಕೇಂದ್ರದ ಮಾಜಿ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಐಸಿಎಫ್ಎಐ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕರಾದ ಎನ್.ಜೆ.ಯಶಸ್ವಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಭಾಗಿಯಾಗುವಲ್ಲಿ ಯಶಸ್ವಿ ಅವರ ಕೊಡುಗೆ ಮಹತ್ವದ್ದು. ಅವರು ಆ ಕಾಲದ ಶಿಕ್ಷಣ ವ್ಯವಸ್ಥೆಗೆ ಸವಾಲೆಸೆದು, ಹೊಸ ಪಠ್ಯಕ್ರಮವನ್ನು ಜಾರಿಗೆ ತಂದಿದ್ದರು’ ಎಂದು ಸುರೇಶ್ ಪ್ರಭು ಹೇಳಿದರು.