ತಿರುವನಂತಪುರ: ಪ್ರವಾಹಪೀಡಿತ ಕೇರಳಕ್ಕೆ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ನೀಡಿರುವ ₹25 ಕೋಟಿ ಪರಿಹಾರವನ್ನು ಬಿಜೆಪಿ ಸಂಸದರು ಮತ್ತು ಸಚಿವರು ನೀಡಿದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ.
‘ಬಿಜೆಪಿ ಸಚಿವರು ಮತ್ತು ಸಂಸದರು ಕೇರಳಕ್ಕೆ ದೇಣಿಗೆ ನೀಡಿದ್ದಾರೆ. ನಾವೇನೂ ಸ್ವೀಕರಿಸಿಲ್ಲ ಅಂತ ಹೇಳಬೇಡಿ’. ಹೀಗೊಂದು ಸಂದೇಶ ಶ್ರೀಕುಮಾರ್ ಶ್ರೀಧರನ್ನಾಯರ್ ಎಂಬುವವರ ಫೇಸ್ಬುಕ್ ಖಾತೆಯಲ್ಲಿ ಹರಿದಾಡುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ₹25 ಕೋಟಿ ಮೊತ್ತದ ಚೆಕ್ ಸ್ವೀಕರಿಸುತ್ತಿರುವ ಫೋಟೊವೂ ಸಂದೇಶದ ಜತೆಗಿದೆ. ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ, ಬಿಜೆಪಿ ಸಂಸದ ವಿ. ಮುರಳೀಧರನ್ ಸಹ ಚಿತ್ರದಲ್ಲಿದ್ದಾರೆ. ಈ ಸಂದೇಶವನ್ನು ಸಾವಿರಾರು ಮಂದಿ ಶೇರ್ ಮಾಡಿದ್ದಾರೆ.