‘ನೀವು ನಮ್ಮಿಂದ ರಕ್ಷಣೆ ಬಯಸುತ್ತಿದ್ದೀರಿ, ಆದರೆ ನೀವು ಎಲ್ಲಿದ್ದೀರಿ ಎಂಬುದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ನೀವು ವಿದೇಶದಲ್ಲಿದ್ದು ವಕೀಲರ ಮೂಲಕ ಅರ್ಜಿ ಸಲ್ಲಿಸಿರಬಹುದು. ಹಾಗಿದ್ದಲ್ಲಿ, ನಾವು ನಿಮ್ಮ ಪರ ಆದೇಶ ನೀಡಿದರೆ ಮಾತ್ರ ನೀವು ಭಾರತಕ್ಕೆ ಬರುತ್ತೀರಿ. ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ. ಹಾಗಾಗಿ ನೀವು ಎಲ್ಲಿದ್ದೀರಿ ಎಂಬುದು ನಮಗೆ ಮನದಟ್ಟಾಗುವ ತನಕ ನಿಮಗೆ ಯಾವುದೇ ರೀತಿಯ ರಕ್ಷಣೆ ನೀಡಲಾಗದು. ಅಂಥೆಯೇ ನಿಮ್ಮ ಪ್ರಕರಣದ ವಿಚಾರಣೆಯನ್ನೂ ನಡೆಸಲಾಗದು’ ಎಂದು ಪೀಠ ತಿಳಿಸಿತು.