ಈ ಬಗ್ಗೆ ಟ್ವೀಟ್ ಮಾಡಿರುವ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್, '1950ರ ನಂತರ ಇದೇ ಮೊದಲ ಬಾರಿ ವಿರೋಧ ಪಕ್ಷಗಳ ಸಂಸದರು ಸರ್ಕಾರವನ್ನು ಪ್ರಶ್ನಿಸುವ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಸಂಸತ್ತಿನ ಒಟ್ಟು ಅಧಿವೇಶನದ ಸಮಯ ಅಷ್ಟೇ ಇದೆ. ಹಾಗಿದ್ದರೆ, ಪ್ರಶ್ನೋತ್ತರ ಅವಧಿಯನ್ನು ಏಕೆ ರದ್ದುಗೊಳಿಸಬೇಕು? ಪ್ರಜಾಪ್ರಭುತ್ವವನ್ನು ಹತ್ಯೆಗೈಯ್ಯಲು ಸಾಂಕ್ರಾಮಿಕದ ನೆಪ ಒಡ್ಡಲಾಗಿದೆ' ಎಂದು ಹೇಳಿದ್ದಾರೆ.