ಜಾಲಾವಾಡವನ್ನು ಪ್ರವೇಶಿಸಿದ ಪಕ್ಷದ ಪರಿವರ್ತನಾ ಸಂಕಲ್ಪ ಯಾತ್ರೆಯಲ್ಲಿ ರಾಜೇ ಮತ್ತು ಅವರ ಪುತ್ರ, ಜಾಲಾವಾಡ–ಬಾರನ್ ಕ್ಷೇತ್ರದ ಸಂಸದ ದುಶ್ಯಂತ್ ಸಿಂಗ್ ಭಾಗವಹಿಸಲಿಲ್ಲ. ಮುಖ್ಯಮಂತ್ರಿ, ಕೇಂದ್ರ ಸಚಿವೆಯೂ ಆಗಿದ್ದ ರಾಜೇ ಅವರು ಸುಮಾರು 33 ವರ್ಷಗಳಿಂದ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅವರ ಈ ಗೈರು ಹಾಜರಿ ಪಕ್ಷದೊಳಗೆ ಅಸಮಾಧಾನ ಉಂಟಾಗಿದೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿನೀಡಿದೆ.