<p><strong>ನವದೆಹಲಿ</strong>: ಪದವಿ ಹಂತದಲ್ಲಿ ವಿಶ್ವವಿದ್ಯಾಲಯ ಪ್ರವೇಶಕ್ಕಾಗಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಯುಇಟಿ–ಯುಜಿ) ಹಾಗೂ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಎನ್ಇಟಿ) ‘ಅಂಕಗಳ ಸಾಮಾನ್ಯೀಕರಣ’ ಪ್ರಕ್ರಿಯೆಯನ್ನು ಈ ವರ್ಷದಿಂದ ಕೈಬಿಡಲಾಗುತ್ತದೆ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಯುಜಿಸಿ) ಮುಖ್ಯಸ್ಥ ಜಗದೀಶ್ ಕುಮಾರ್ ಹೇಳಿದ್ದಾರೆ.</p>.<p>ಇವೆರಡಕ್ಕೂ, ವಿಷಯವೊಂದಕ್ಕೆ ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಹೀಗಾಗಿ ಅಂಕಗಳ ಸಾಮಾನ್ಯೀಕರಣವು ಈ ವರ್ಷದಿಂದ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿಯೊಬ್ಬನ ಅಂಕವನ್ನು ಪರಿಷ್ಕರಿಸಿ, ಅದನ್ನು ಇನ್ನೊಬ್ಬ ವಿದ್ಯಾರ್ಥಿಯ ಅಂಕದ ಜೊತೆ ಹೋಲಿಸಲು ಸೂಕ್ತವಾಗುವಂತೆ ಮಾಡುವುದನ್ನು ‘ಅಂಕಗಳ ಸಾಮಾನ್ಯೀಕರಣ’ ಎಂದು ಕರೆಯಲಾಗುತ್ತದೆ.</p>.<p>ಒಂದೇ ವಿಷಯದ ಮೇಲಿನ ಪರೀಕ್ಷೆಯನ್ನು ಹಲವು ಅವಧಿಗಳಲ್ಲಿ, ಬೇರೆ ಬೇರೆ ಪ್ರಶ್ನೆಪತ್ರಿಕೆಗಳೊಂದಿಗೆ ನಡೆಸಿದಾಗ ಈ ಪ್ರಕ್ರಿಯೆ ಅಗತ್ಯವಾಗುತ್ತದೆ. ಆದರೆ, ಈ ಪ್ರಕ್ರಿಯೆಯು ಪರೀಕ್ಷೆಗಳಲ್ಲಿ ತಾವು ತೋರುವ ಸಾಧನೆಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.</p>.<p>‘ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆಯ ಪರೀಕ್ಷಾ ಕೇಂದ್ರವನ್ನು ಸಾಧ್ಯವಾದಷ್ಟು ಮಟ್ಟಿಗೆ ಒದಗಿಸುವ ಉದ್ದೇಶದಿಂದ ನಾವು ಈ ಮೊದಲು ಒಂದೇ ವಿಷಯ ಕುರಿತ ಪರೀಕ್ಷೆಯನ್ನು ಎರಡು–ಮೂರು ದಿನಗಳಲ್ಲಿ ನಡೆಸಬೇಕಿತ್ತು. ಆದರೆ ಈ ವರ್ಷ ಒಎಂಆರ್ ಮಾದರಿಯನ್ನು ಅಳವಡಿಸಿಕೊಂಡಿರುವ ಕಾರಣ, ಶಾಲೆ ಮತ್ತು ಕಾಲೇಜುಗಳಲ್ಲಿ ಭಾರಿ ಸಂಖ್ಯೆಯಲ್ಲಿ ಪರೀಕ್ಷಾ ಕೇಂದ್ರಗಳು ಲಭ್ಯವಾಗಲಿವೆ. ಆಗ ನಮಗೆ ಇಡೀ ದೇಶದಲ್ಲಿ ಪರೀಕ್ಷೆಯನ್ನು ಒಂದೇ ದಿನ ನಡೆಸಲು ಆಗಲಿದೆ’ ಎಂದು ಅವರು ವಿವರಿಸಿದ್ದಾರೆ.</p>.<p>ಒಂದೇ ವಿಷಯಕ್ಕೆ ಪರೀಕ್ಷೆಯನ್ನು ಹಲವು ದಿನಗಳಲ್ಲಿ ನಡೆಸಿದಾಗ ಅಂಕಗಳ ಸಾಮಾನ್ಯೀಕರಣದ ಅಗತ್ಯ ಇರುತ್ತದೆ. ಅದು ವೈಜ್ಞಾನಿಕ ವಿಧಾನವೂ ಹೌದು ಎಂದು ಅವರು ಹೇಳಿದ್ದಾರೆ.</p>.<p>ಈ ವರ್ಷ ಸಿಯುಇಟಿ–ಯುಜಿ ಪರೀಕ್ಷೆಯನ್ನು ಮೇ 15ರಿಂದ 24ರವರೆಗೆ ನಡೆಸಲಾಗುತ್ತಿದೆ. ಯುಜಿಸಿ–ಎನ್ಇಟಿ ಪರೀಕ್ಷೆಯು ಜೂನ್ 16ರಂದು ನಡೆಯಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪದವಿ ಹಂತದಲ್ಲಿ ವಿಶ್ವವಿದ್ಯಾಲಯ ಪ್ರವೇಶಕ್ಕಾಗಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಯುಇಟಿ–ಯುಜಿ) ಹಾಗೂ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಎನ್ಇಟಿ) ‘ಅಂಕಗಳ ಸಾಮಾನ್ಯೀಕರಣ’ ಪ್ರಕ್ರಿಯೆಯನ್ನು ಈ ವರ್ಷದಿಂದ ಕೈಬಿಡಲಾಗುತ್ತದೆ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಯುಜಿಸಿ) ಮುಖ್ಯಸ್ಥ ಜಗದೀಶ್ ಕುಮಾರ್ ಹೇಳಿದ್ದಾರೆ.</p>.<p>ಇವೆರಡಕ್ಕೂ, ವಿಷಯವೊಂದಕ್ಕೆ ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಹೀಗಾಗಿ ಅಂಕಗಳ ಸಾಮಾನ್ಯೀಕರಣವು ಈ ವರ್ಷದಿಂದ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿಯೊಬ್ಬನ ಅಂಕವನ್ನು ಪರಿಷ್ಕರಿಸಿ, ಅದನ್ನು ಇನ್ನೊಬ್ಬ ವಿದ್ಯಾರ್ಥಿಯ ಅಂಕದ ಜೊತೆ ಹೋಲಿಸಲು ಸೂಕ್ತವಾಗುವಂತೆ ಮಾಡುವುದನ್ನು ‘ಅಂಕಗಳ ಸಾಮಾನ್ಯೀಕರಣ’ ಎಂದು ಕರೆಯಲಾಗುತ್ತದೆ.</p>.<p>ಒಂದೇ ವಿಷಯದ ಮೇಲಿನ ಪರೀಕ್ಷೆಯನ್ನು ಹಲವು ಅವಧಿಗಳಲ್ಲಿ, ಬೇರೆ ಬೇರೆ ಪ್ರಶ್ನೆಪತ್ರಿಕೆಗಳೊಂದಿಗೆ ನಡೆಸಿದಾಗ ಈ ಪ್ರಕ್ರಿಯೆ ಅಗತ್ಯವಾಗುತ್ತದೆ. ಆದರೆ, ಈ ಪ್ರಕ್ರಿಯೆಯು ಪರೀಕ್ಷೆಗಳಲ್ಲಿ ತಾವು ತೋರುವ ಸಾಧನೆಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.</p>.<p>‘ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆಯ ಪರೀಕ್ಷಾ ಕೇಂದ್ರವನ್ನು ಸಾಧ್ಯವಾದಷ್ಟು ಮಟ್ಟಿಗೆ ಒದಗಿಸುವ ಉದ್ದೇಶದಿಂದ ನಾವು ಈ ಮೊದಲು ಒಂದೇ ವಿಷಯ ಕುರಿತ ಪರೀಕ್ಷೆಯನ್ನು ಎರಡು–ಮೂರು ದಿನಗಳಲ್ಲಿ ನಡೆಸಬೇಕಿತ್ತು. ಆದರೆ ಈ ವರ್ಷ ಒಎಂಆರ್ ಮಾದರಿಯನ್ನು ಅಳವಡಿಸಿಕೊಂಡಿರುವ ಕಾರಣ, ಶಾಲೆ ಮತ್ತು ಕಾಲೇಜುಗಳಲ್ಲಿ ಭಾರಿ ಸಂಖ್ಯೆಯಲ್ಲಿ ಪರೀಕ್ಷಾ ಕೇಂದ್ರಗಳು ಲಭ್ಯವಾಗಲಿವೆ. ಆಗ ನಮಗೆ ಇಡೀ ದೇಶದಲ್ಲಿ ಪರೀಕ್ಷೆಯನ್ನು ಒಂದೇ ದಿನ ನಡೆಸಲು ಆಗಲಿದೆ’ ಎಂದು ಅವರು ವಿವರಿಸಿದ್ದಾರೆ.</p>.<p>ಒಂದೇ ವಿಷಯಕ್ಕೆ ಪರೀಕ್ಷೆಯನ್ನು ಹಲವು ದಿನಗಳಲ್ಲಿ ನಡೆಸಿದಾಗ ಅಂಕಗಳ ಸಾಮಾನ್ಯೀಕರಣದ ಅಗತ್ಯ ಇರುತ್ತದೆ. ಅದು ವೈಜ್ಞಾನಿಕ ವಿಧಾನವೂ ಹೌದು ಎಂದು ಅವರು ಹೇಳಿದ್ದಾರೆ.</p>.<p>ಈ ವರ್ಷ ಸಿಯುಇಟಿ–ಯುಜಿ ಪರೀಕ್ಷೆಯನ್ನು ಮೇ 15ರಿಂದ 24ರವರೆಗೆ ನಡೆಸಲಾಗುತ್ತಿದೆ. ಯುಜಿಸಿ–ಎನ್ಇಟಿ ಪರೀಕ್ಷೆಯು ಜೂನ್ 16ರಂದು ನಡೆಯಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>