ಈ ವೇಳೆ ಮಾತನಾಡಿರುವ ಶರ್ಮಾ ಅವರು, ‘ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿನ ಬಿಜೆಪಿ ಬೆಳವಣಿಗೆಗಳು ನನಗೆ ದುಃಖ ತರಿಸಿವೆ.ಅಲಿಪುರದೂರ್ ಜಿಲ್ಲೆಯ ಎಲ್ಲ ಐದೂ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟರೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ನಮ್ಮನ್ನು ಸಂಪರ್ಕಿಸಲಿಲ್ಲ. ಚುನಾವಣೆಗೂ ಮುಂಚೆ ನಾನು ಬಿಜೆಪಿ ತೊರೆದಿದ್ದರೆ ಅವರು ನನ್ನನ್ನು ದೇಶದ್ರೋಹಿ ಎನ್ನುತ್ತಿದ್ದರು‘ ಎಂದು ಹೇಳಿದ್ದಾರೆ.