ಘಟನೆ ವಿವರ:ಕೆಲವು ಸರ್ಕಾರಿ ಕಚೇರಿಗಳನ್ನು ಉದ್ಘಾಟಿಸಲು ಭಾನುವಾರ ಸಿದ್ಧಿಪೇಟ್ಗೆ ಆಗಮಿಸಿದ್ದ ಮುಖ್ಯಮಂತ್ರಿ ಚಂದ್ರೇಶೇಖರ್ ರಾವ್ ಅವರು, ಜಿಲ್ಲಾಧಿಕಾರಿ ಕಚೇರಿಯನ್ನೂ ಉದ್ಘಾಟಿಸಿದರು. ಕಚೇರಿ ಉದ್ಘಾಟನೆ ನಂತರ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಕುರ್ಚಿ ಮೇಲೆ ಕುಳಿತ ವೆಂಕಟರಾಮ ರೆಡ್ಡಿ, ತಕ್ಷಣ ಎದ್ದು ನಿಂತು ಪಕ್ಕದಲ್ಲಿದ್ದ ಸಿಎಂ ಚಂದ್ರಶೇಖರ್ ಅವರ ಕಾಲುಮುಟ್ಟಿ ನಮಸ್ಕರಿಸಿದರು. ಈದೃಶ್ಯದ ತುಣುಕು ವೈರಲ್ ಆಗಿತ್ತು.