<p><strong>ಸವಣೂರು:</strong> ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಜಂಗಿ ಬಯಲು ಕುಸ್ತಿಯ ಕಡೆಯ ಪಂದ್ಯದಲ್ಲಿ ದಾವಣಗೆರೆ ಯೋಗೇಶ್ ಪೈಲ್ವಾನ್ ಅವರು ಕೊಡಂಬಿ ಗ್ರಾಮದ ವಾಸಿಂ ಪೈಲ್ವಾನ ಅವರನ್ನು ಸೋಲಿಸುವ ಮೂಲಕ ಬೆಳ್ಳಿ ಕಡೆ ಗೆದ್ದರು.</p>.<p>ಮೂರು ದಿನಗಳ ಕಾಲ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಪೈಲ್ವಾನರು ಭಾಗವಹಿಸಿದ್ದರು.</p>.<p>ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳು ಗೆಲುವಿಗಾಗಿ ಸೆಣಸಾಡುತ್ತಿದ್ದರೆ, ಸಾವಿರಾರು ಪ್ರೇಕ್ಷಕರು ಚಪ್ಪಾಳೆ, ಸಿಳ್ಳೆ ಹಾಕುವ ಮೂಲಕ ಕುಸ್ತಿಪಟುಗಳನ್ನು ಹುರಿದುಂಬಿಸಿದರು. ಕೆಲವರು ಹಲಿಗೆ ಬಾರಿಸುವ ಮೂಲಕ ಪೈಲ್ವಾನರನ್ನು ಪ್ರೋತ್ಸಾಹಿಸಿದರು.</p>.<p>ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ್ ಕುಸ್ತಿಗೆ ಚಾಲನೆ ನೀಡಿದರು. ಹಿರಿಯ ಪೈಲ್ವಾನರನ್ನು, ಸಾಮಾಜಿಕ ಕಾರ್ಯಕರ್ತರನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.</p>.<p>ಪ್ರಮುಖರಾದ ಹೊನ್ನಪ್ಪ ಕೊಳ್ಳವರ, ಭರ್ಮಪ್ಪ ಕಲಾದಗಿ, ಸುಭಾಸ ಮಜ್ಜಗಿ, ಉಡಚಪ್ಪ ದೊಡ್ಡಉಚಪ್ಪನವರ, ನಾಗಪ್ಪ ತಿಪ್ಪಕ್ಕನವರ, ನಿಂಗಪ್ಪ ಯರೇಶಿಮಿ, ಸಿದ್ಧನಗೌಡ ಪಾಟೀಲ, ಪಾಂಡಪ್ಪ ತಿಪ್ಪಕ್ಕವರ, ಶೇಖಪ್ಪ ಕಲಕೋಟಿ, ರುದ್ರಪ್ಪ ಕಳ್ಳಿಮನಿ, ಪ್ರಕಾಶ ಬಾರ್ಕಿ, ನಿಂಗಪ್ಪ ಮತ್ತೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವಣೂರು:</strong> ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಜಂಗಿ ಬಯಲು ಕುಸ್ತಿಯ ಕಡೆಯ ಪಂದ್ಯದಲ್ಲಿ ದಾವಣಗೆರೆ ಯೋಗೇಶ್ ಪೈಲ್ವಾನ್ ಅವರು ಕೊಡಂಬಿ ಗ್ರಾಮದ ವಾಸಿಂ ಪೈಲ್ವಾನ ಅವರನ್ನು ಸೋಲಿಸುವ ಮೂಲಕ ಬೆಳ್ಳಿ ಕಡೆ ಗೆದ್ದರು.</p>.<p>ಮೂರು ದಿನಗಳ ಕಾಲ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಪೈಲ್ವಾನರು ಭಾಗವಹಿಸಿದ್ದರು.</p>.<p>ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳು ಗೆಲುವಿಗಾಗಿ ಸೆಣಸಾಡುತ್ತಿದ್ದರೆ, ಸಾವಿರಾರು ಪ್ರೇಕ್ಷಕರು ಚಪ್ಪಾಳೆ, ಸಿಳ್ಳೆ ಹಾಕುವ ಮೂಲಕ ಕುಸ್ತಿಪಟುಗಳನ್ನು ಹುರಿದುಂಬಿಸಿದರು. ಕೆಲವರು ಹಲಿಗೆ ಬಾರಿಸುವ ಮೂಲಕ ಪೈಲ್ವಾನರನ್ನು ಪ್ರೋತ್ಸಾಹಿಸಿದರು.</p>.<p>ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ್ ಕುಸ್ತಿಗೆ ಚಾಲನೆ ನೀಡಿದರು. ಹಿರಿಯ ಪೈಲ್ವಾನರನ್ನು, ಸಾಮಾಜಿಕ ಕಾರ್ಯಕರ್ತರನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.</p>.<p>ಪ್ರಮುಖರಾದ ಹೊನ್ನಪ್ಪ ಕೊಳ್ಳವರ, ಭರ್ಮಪ್ಪ ಕಲಾದಗಿ, ಸುಭಾಸ ಮಜ್ಜಗಿ, ಉಡಚಪ್ಪ ದೊಡ್ಡಉಚಪ್ಪನವರ, ನಾಗಪ್ಪ ತಿಪ್ಪಕ್ಕನವರ, ನಿಂಗಪ್ಪ ಯರೇಶಿಮಿ, ಸಿದ್ಧನಗೌಡ ಪಾಟೀಲ, ಪಾಂಡಪ್ಪ ತಿಪ್ಪಕ್ಕವರ, ಶೇಖಪ್ಪ ಕಲಕೋಟಿ, ರುದ್ರಪ್ಪ ಕಳ್ಳಿಮನಿ, ಪ್ರಕಾಶ ಬಾರ್ಕಿ, ನಿಂಗಪ್ಪ ಮತ್ತೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>