ನವದೆಹಲಿ: ಐಫೋನ್ ಹ್ಯಾಕ್ ಮಾಡಲು ಪ್ರಯತ್ನಿಸುತ್ತಿರುವ ಕುರಿತು ವಿರೋಧ ಪಕ್ಷಗಳ ನಾಯಕರಿಗೆ ಆ್ಯಪಲ್ ಕಂಪನಿಯು ಕಳುಹಿಸಿದ್ದ ‘ಎಚ್ಚರಿಕೆ ಸೂಚನೆ’ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಗಣಕಯಂತ್ರ ತುರ್ತು ಸ್ಪಂದನಾ ತಂಡವು (ಸಿಇಆರ್ಟಿ–ಇನ್) ತನಿಖೆ ಆರಂಭಿಸಿದೆ. ಜೊತೆಗೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪ್ರಕರಣ ಸಂಬಂಧ ಆ್ಯಪಲ್ ಕಂಪನಿಗೆ ನೋಟಿಸ್ ಜಾರಿ ಮಾಡಿದೆ.