<p><strong>ಜಾಜ್ಪುರ್</strong>: 20 ವರ್ಷದ ಯುವಕನೊಬ್ಬ ತಂದೆಯನ್ನು ಕೊಚ್ಚಿ ಕೊಂದು, ಮಲತಾಯಿ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಒಡಿಶಾದ ಜಾಜ್ಪುರ್ ಜಿಲ್ಲೆಯಿಂದ ವರದಿಯಾಗಿದೆ.</p>.<p>ಕುಟುಂಬದಲ್ಲಿ ಏರ್ಪಟ್ಟಿದ್ದ ವಿವಾದದ ಹಿನ್ನೆಲೆಯಲ್ಲಿ ಯುವಕ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.</p>.<p>ಬೇರೆ ಹಳ್ಳಿಯಲ್ಲಿ ವಾಸವಿದ್ದ ಯುವಕ ತಂದೆ ಜೊತೆ ಇರಲು ಮಲತಾಯಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಭಾನುವಾರ ರಾತ್ರಿ ತಂದೆ ಮನೆಗೆ ಹೋಗಿದ್ದ ಯವಕ ಮಲತಾಯಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಈ ಸಂದರ್ಭ ತಂದೆ, ಪತ್ನಿಯ ನೆರವಿಗೆ ಧಾವಿಸಿದ್ದಾರೆ. ಬಳಿಕ, ಮಾತಿಗೆ ಮಾತು ಬೆಳೆದು, ಯುವಕ ಹರಿತವಾದ ಆಯುಧದಿಂದ ತಂದೆಯನ್ನು ಕೊಚ್ಚಿ ಕೊಂದಿದ್ದಾನೆ. ಮಲತಾಯಿ ಮೇಲೆ ಅತ್ಯಾಚಾರ ಎಸಗಿ ಓಡಿಹೋಗಿದ್ದಾನೆ ಎಂದು ಆರೋಪಿಸಲಾಗಿದೆ.</p>.<p>ಮಲತಾಯಿ ದೂರಿನ ಮೇಲೆ ಸೋಮವಾರ ಆತನನ್ನು ಬಂಧಿಸಿದ್ದಾರೆ.</p>.<p>‘ತಂದೆ ಕೊಲೆ ಮತ್ತು ಮಲತಾಯಿ ಮೇಲೆ ಅತ್ಯಾಚಾರದ ಕುರಿತಾಗಿ ಆರೋಪಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದೇವೆ. ತನ್ನ ತಂದೆಯೊಂದಿಗೆ ಇರಲು ಯುವಕನಿಗೆ ಮಲತಾಯಿ ಅವಕಾಶ ನೀಡಿರಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾಜ್ಪುರ್</strong>: 20 ವರ್ಷದ ಯುವಕನೊಬ್ಬ ತಂದೆಯನ್ನು ಕೊಚ್ಚಿ ಕೊಂದು, ಮಲತಾಯಿ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಒಡಿಶಾದ ಜಾಜ್ಪುರ್ ಜಿಲ್ಲೆಯಿಂದ ವರದಿಯಾಗಿದೆ.</p>.<p>ಕುಟುಂಬದಲ್ಲಿ ಏರ್ಪಟ್ಟಿದ್ದ ವಿವಾದದ ಹಿನ್ನೆಲೆಯಲ್ಲಿ ಯುವಕ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.</p>.<p>ಬೇರೆ ಹಳ್ಳಿಯಲ್ಲಿ ವಾಸವಿದ್ದ ಯುವಕ ತಂದೆ ಜೊತೆ ಇರಲು ಮಲತಾಯಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಭಾನುವಾರ ರಾತ್ರಿ ತಂದೆ ಮನೆಗೆ ಹೋಗಿದ್ದ ಯವಕ ಮಲತಾಯಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಈ ಸಂದರ್ಭ ತಂದೆ, ಪತ್ನಿಯ ನೆರವಿಗೆ ಧಾವಿಸಿದ್ದಾರೆ. ಬಳಿಕ, ಮಾತಿಗೆ ಮಾತು ಬೆಳೆದು, ಯುವಕ ಹರಿತವಾದ ಆಯುಧದಿಂದ ತಂದೆಯನ್ನು ಕೊಚ್ಚಿ ಕೊಂದಿದ್ದಾನೆ. ಮಲತಾಯಿ ಮೇಲೆ ಅತ್ಯಾಚಾರ ಎಸಗಿ ಓಡಿಹೋಗಿದ್ದಾನೆ ಎಂದು ಆರೋಪಿಸಲಾಗಿದೆ.</p>.<p>ಮಲತಾಯಿ ದೂರಿನ ಮೇಲೆ ಸೋಮವಾರ ಆತನನ್ನು ಬಂಧಿಸಿದ್ದಾರೆ.</p>.<p>‘ತಂದೆ ಕೊಲೆ ಮತ್ತು ಮಲತಾಯಿ ಮೇಲೆ ಅತ್ಯಾಚಾರದ ಕುರಿತಾಗಿ ಆರೋಪಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದೇವೆ. ತನ್ನ ತಂದೆಯೊಂದಿಗೆ ಇರಲು ಯುವಕನಿಗೆ ಮಲತಾಯಿ ಅವಕಾಶ ನೀಡಿರಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>