<p><strong>ಚಂಡೀಗಢ</strong>: ಶಿರೋಮಣಿ ಅಕಾಲಿ ದಳದ (ಎಸ್ಎಡಿ) ನಾಯಕ, ಸುಖ್ಬೀರ್ ಸಿಂಗ್ ಬಾದಲ್ ಅವರು ಧಾರ್ಮಿಕ ಶಿಕ್ಷೆಯ ಆರನೇ ದಿನ ಫತೇಗಢ ಸಾಹಿಬ್ನಲ್ಲಿರುವ ಗುರುದ್ವಾರದಲ್ಲಿ ಭಾನುವಾರ ‘ಸೇವಾದಾರ’ನಾಗಿ ಕೆಲಸ ಮಾಡಿದರು.</p>.<p>ಗಾಲಿ ಕುರ್ಚಿಯನ್ನು ಆಶ್ರಯಿಸಿರುವ ಅವರು ‘ಕೀರ್ತನೆ’ಗಳನ್ನು ಆಲಿಸಿದರಲ್ಲದೆ, ಗುರುದ್ವಾರದ ಹೊರಭಾಗದಲ್ಲಿ ಪಾತ್ರೆ ತೊಳೆಯುವ ಕೆಲಸವನ್ನೂ ನಿರ್ವಹಿಸಿದರು. </p>.<p>‘ಸೇವಾದಾರ’ರು ಧರಿಸುವ ನೀಲಿ ಬಣ್ಣದ ಸಮವಸ್ತ್ರ ತೊಟ್ಟಿದ್ದ ಅವರು ಬೆಳಿಗ್ಗೆ 9 ಗಂಟೆಗೆ ಗುರುದ್ವಾರಕ್ಕೆ ಬಂದರು. ಬಾದಲ್ ಅವರಿಗೆ ಝಡ್ ಪ್ಲಸ್ ದರ್ಜೆಯ ಭದ್ರತೆ ನೀಡಲಾಗಿದ್ದು, ಗುರುದ್ವಾರಕ್ಕೆ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.</p>.<p>ಪಂಜಾಬ್ನಲ್ಲಿ 2007ರಿಂದ 2017ರವರೆಗೆ ಎಸ್ಎಡಿ ಪಕ್ಷದ ಅಧಿಕಾರ ಅವಧಿಯಲ್ಲಿ ಆಗಿರುವ ‘ತಪ್ಪುಗಳಿಗೆ’ ಪ್ರಾಯಶ್ಚಿತ್ತವಾಗಿ 62 ವರ್ಷದ ಬಾದಲ್, ಧಾರ್ಮಿಕ ಶಿಕ್ಷೆಗೆ ಗುರಿಯಾಗಿದ್ದಾರೆ.</p>.<p>ಅಮೃತಸರದ ಸ್ವರ್ಣಮಂದಿರ ಅಲ್ಲದೆ, ಇತರ ನಾಲ್ಕು ಗುರುದ್ವಾರಗಳಲ್ಲಿ ತಲಾ ಎರಡು ದಿನ ‘ಸೇವಾದಾರ’ ಆಗಿ ಕೆಲಸ ಮಾಡುವ ಶಿಕ್ಷೆ ಅವರಿಗೆ ವಿಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ</strong>: ಶಿರೋಮಣಿ ಅಕಾಲಿ ದಳದ (ಎಸ್ಎಡಿ) ನಾಯಕ, ಸುಖ್ಬೀರ್ ಸಿಂಗ್ ಬಾದಲ್ ಅವರು ಧಾರ್ಮಿಕ ಶಿಕ್ಷೆಯ ಆರನೇ ದಿನ ಫತೇಗಢ ಸಾಹಿಬ್ನಲ್ಲಿರುವ ಗುರುದ್ವಾರದಲ್ಲಿ ಭಾನುವಾರ ‘ಸೇವಾದಾರ’ನಾಗಿ ಕೆಲಸ ಮಾಡಿದರು.</p>.<p>ಗಾಲಿ ಕುರ್ಚಿಯನ್ನು ಆಶ್ರಯಿಸಿರುವ ಅವರು ‘ಕೀರ್ತನೆ’ಗಳನ್ನು ಆಲಿಸಿದರಲ್ಲದೆ, ಗುರುದ್ವಾರದ ಹೊರಭಾಗದಲ್ಲಿ ಪಾತ್ರೆ ತೊಳೆಯುವ ಕೆಲಸವನ್ನೂ ನಿರ್ವಹಿಸಿದರು. </p>.<p>‘ಸೇವಾದಾರ’ರು ಧರಿಸುವ ನೀಲಿ ಬಣ್ಣದ ಸಮವಸ್ತ್ರ ತೊಟ್ಟಿದ್ದ ಅವರು ಬೆಳಿಗ್ಗೆ 9 ಗಂಟೆಗೆ ಗುರುದ್ವಾರಕ್ಕೆ ಬಂದರು. ಬಾದಲ್ ಅವರಿಗೆ ಝಡ್ ಪ್ಲಸ್ ದರ್ಜೆಯ ಭದ್ರತೆ ನೀಡಲಾಗಿದ್ದು, ಗುರುದ್ವಾರಕ್ಕೆ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.</p>.<p>ಪಂಜಾಬ್ನಲ್ಲಿ 2007ರಿಂದ 2017ರವರೆಗೆ ಎಸ್ಎಡಿ ಪಕ್ಷದ ಅಧಿಕಾರ ಅವಧಿಯಲ್ಲಿ ಆಗಿರುವ ‘ತಪ್ಪುಗಳಿಗೆ’ ಪ್ರಾಯಶ್ಚಿತ್ತವಾಗಿ 62 ವರ್ಷದ ಬಾದಲ್, ಧಾರ್ಮಿಕ ಶಿಕ್ಷೆಗೆ ಗುರಿಯಾಗಿದ್ದಾರೆ.</p>.<p>ಅಮೃತಸರದ ಸ್ವರ್ಣಮಂದಿರ ಅಲ್ಲದೆ, ಇತರ ನಾಲ್ಕು ಗುರುದ್ವಾರಗಳಲ್ಲಿ ತಲಾ ಎರಡು ದಿನ ‘ಸೇವಾದಾರ’ ಆಗಿ ಕೆಲಸ ಮಾಡುವ ಶಿಕ್ಷೆ ಅವರಿಗೆ ವಿಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>