ನವದೆಹಲಿ: ರಾಜಸ್ಥಾನದಲ್ಲಿ ಶಾಂತಿ ಕದಡಲು ಮತ್ತು ಕೋಮು ದ್ವೇಷ ಹರಡಲು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಚು ರೂಪಿಸಿದ ಪ್ರಕರಣದಲ್ಲಿ ಮೂರನೇ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಉದಯಪುರದ ಮುರ್ಶಿದ್ ನಗರದ ನಿವಾಸಿ ಮೊಹಮ್ಮದ್ ಸೊಹೈಲ್ ಬಂಧಿತ ಆರೋಪಿ. ಈತನನ್ನು ಜೈಪುರದಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ಫೆಡರಲ್ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.
ಈ ಹಿಂದೆ ತನಿಖಾ ದಳವು ಸಾದಿಕ್ ಸಾರಫ್ ಮತ್ತು ಮೊಹಮ್ಮದ್ ಆಸಿಪ್ ಎನ್ನುವ ಇಬ್ಬರನ್ನು ಬಂಧಿಸಿ, ಸೆಪ್ಟೆಂಬರ್ 19ರಂದು ನವದೆಹಲಿಯಲ್ಲಿ ಪ್ರಕರಣ ದಾಖಲಿಸಿತ್ತು.