<p><strong>ಮುಂಬೈ:</strong> ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಏಕನಾಥ ಶಿಂದೆ ನೇತೃತ್ವದ ಸರ್ಕಾರವು ₹11 ಕೋಟಿ ಬಹುಮಾನ ಘೋಷಿಸಿರುವುದು ವಿರೋಧ ಪಕ್ಷ ಕಾಂಗ್ರೆಸ್, ಶಿವಸೇನೆ ಮತ್ತು ಆಡಳಿತರೂಢ ಬಿಜೆಪಿ ನಡುವೆ ವಾಗ್ವದಕ್ಕೆ ಕಾರಣವಾಯಿತು.</p><p>'ಭಾರತ ಕ್ರಿಕೆಟ್ ತಂಡದ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ. ಆದರೆ ಸರ್ಕಾರದ ಬೊಕ್ಕಸದಿಂದ 11 ಕೋಟಿ ನೀಡುವ ಅಗತ್ಯವಿರಲಿಲ್ಲ. ಮುಖ್ಯಮಂತ್ರಿಗಳು ತಮ್ಮ ಜೇಬಿನಿಂದ ಹಣ ನೀಡಲಿ’ ಎಂದು ವಿರೋಧಪಕ್ಷಗಳು ಆಗ್ರಹಿಸಿದವು.</p><p>ಭಾರತದ ತಂಡದ ಆಟಗಾರರಾದ ಮುಂಬೈ ಮೂಲದ ರೋಹಿತ್ ಶರ್ಮ, ಸೂರ್ಯಕುಮಾರ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆಯವರನ್ನು ವಿಧಾನ ಭವನದಲ್ಲಿ ಅಭಿನಂದಿಸಿದ ಶಿಂದೆ ಅವರು ತಂಡಕ್ಕೆ ಸರ್ಕಾರದಿಂದ ₹11 ಕೋಟಿ ನೀಡುವುದಾಗಿ ಘೋಷಿಸಿದ್ದರು. </p><p>‘ರಾಜ್ಯದ ಬೊಕ್ಕಸ ಬರಿದಾದರೆ ಬಡಜನರು ಸಾಯುತ್ತಾರೆ. ಆದರೆ ರಾಜ್ಯಸರ್ಕಾರಕ್ಕೆ ಇದರ ಚಿಂತೆಯಿಲ್ಲ. ತನ್ನ ಬೆನ್ನುತಟ್ಟಿಕೊಳ್ಳುವುದೇ ಮುಖ್ಯವಾಗಿದೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ವಿಜಯ್ ವಡೆಟ್ಟಿವರ್ ಅವರು ಟೀಕಿಸಿದರು.</p><p>‘ಗೆದ್ದವರಿಗೆ ಸೂಕ್ತವಾದ ಬಹುಮಾನ ಸಿಕ್ಕಿದೆ. ಒಂದು ವೇಳೆ ಕೊಡುವುದಾದರೆ ಮುಖ್ಯಮಂತ್ರಿಗಳು ತಮ್ಮ ವೈಯುಕ್ತಿಕ ಹಣವನ್ನು ನೀಡಲಿ’ ಎಂದು ವಿಧಾನಪರಿಷತ್ನ ವಿಪಕ್ಷ ನಾಯಕ ಅಂಬಾದಾಸ್ ದಾನ್ವೆ ಆಗ್ರಹಿಸಿದರು.</p><p>ವಿಪಕ್ಷಗಳ ಟೀಕೆಗ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಪ್ರವೀಣ್ ಧಾರೇಕರ್ ಅವರು. ‘ವಿಜಯ್ ಅವರು ತುಚ್ಛ ಮನಸ್ಥಿತಿಯನ್ನು ಹೊಂದಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗಾಧ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಜನರು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ ವಿಜಯ್ ಈ ಕಾರ್ಯಕ್ರಮದಲ್ಲೂ ರಾಜಕೀಯ ಹುಡುಕುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಏಕನಾಥ ಶಿಂದೆ ನೇತೃತ್ವದ ಸರ್ಕಾರವು ₹11 ಕೋಟಿ ಬಹುಮಾನ ಘೋಷಿಸಿರುವುದು ವಿರೋಧ ಪಕ್ಷ ಕಾಂಗ್ರೆಸ್, ಶಿವಸೇನೆ ಮತ್ತು ಆಡಳಿತರೂಢ ಬಿಜೆಪಿ ನಡುವೆ ವಾಗ್ವದಕ್ಕೆ ಕಾರಣವಾಯಿತು.</p><p>'ಭಾರತ ಕ್ರಿಕೆಟ್ ತಂಡದ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ. ಆದರೆ ಸರ್ಕಾರದ ಬೊಕ್ಕಸದಿಂದ 11 ಕೋಟಿ ನೀಡುವ ಅಗತ್ಯವಿರಲಿಲ್ಲ. ಮುಖ್ಯಮಂತ್ರಿಗಳು ತಮ್ಮ ಜೇಬಿನಿಂದ ಹಣ ನೀಡಲಿ’ ಎಂದು ವಿರೋಧಪಕ್ಷಗಳು ಆಗ್ರಹಿಸಿದವು.</p><p>ಭಾರತದ ತಂಡದ ಆಟಗಾರರಾದ ಮುಂಬೈ ಮೂಲದ ರೋಹಿತ್ ಶರ್ಮ, ಸೂರ್ಯಕುಮಾರ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆಯವರನ್ನು ವಿಧಾನ ಭವನದಲ್ಲಿ ಅಭಿನಂದಿಸಿದ ಶಿಂದೆ ಅವರು ತಂಡಕ್ಕೆ ಸರ್ಕಾರದಿಂದ ₹11 ಕೋಟಿ ನೀಡುವುದಾಗಿ ಘೋಷಿಸಿದ್ದರು. </p><p>‘ರಾಜ್ಯದ ಬೊಕ್ಕಸ ಬರಿದಾದರೆ ಬಡಜನರು ಸಾಯುತ್ತಾರೆ. ಆದರೆ ರಾಜ್ಯಸರ್ಕಾರಕ್ಕೆ ಇದರ ಚಿಂತೆಯಿಲ್ಲ. ತನ್ನ ಬೆನ್ನುತಟ್ಟಿಕೊಳ್ಳುವುದೇ ಮುಖ್ಯವಾಗಿದೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ವಿಜಯ್ ವಡೆಟ್ಟಿವರ್ ಅವರು ಟೀಕಿಸಿದರು.</p><p>‘ಗೆದ್ದವರಿಗೆ ಸೂಕ್ತವಾದ ಬಹುಮಾನ ಸಿಕ್ಕಿದೆ. ಒಂದು ವೇಳೆ ಕೊಡುವುದಾದರೆ ಮುಖ್ಯಮಂತ್ರಿಗಳು ತಮ್ಮ ವೈಯುಕ್ತಿಕ ಹಣವನ್ನು ನೀಡಲಿ’ ಎಂದು ವಿಧಾನಪರಿಷತ್ನ ವಿಪಕ್ಷ ನಾಯಕ ಅಂಬಾದಾಸ್ ದಾನ್ವೆ ಆಗ್ರಹಿಸಿದರು.</p><p>ವಿಪಕ್ಷಗಳ ಟೀಕೆಗ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಪ್ರವೀಣ್ ಧಾರೇಕರ್ ಅವರು. ‘ವಿಜಯ್ ಅವರು ತುಚ್ಛ ಮನಸ್ಥಿತಿಯನ್ನು ಹೊಂದಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗಾಧ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಜನರು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ ವಿಜಯ್ ಈ ಕಾರ್ಯಕ್ರಮದಲ್ಲೂ ರಾಜಕೀಯ ಹುಡುಕುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>