<p><strong>ಕೊಚ್ಚಿ</strong>: ಕೇರಳದ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಸೇರಿದಂತೆ 972 ಮಂದಿ ನಿಷೇಧಿತ ಸಂಘಟನೆ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ'ದ (ಪಿಎಫ್ಐ) ಹಿಟ್ಲಿಸ್ಟ್ನಲ್ಲಿದ್ದರು ಎಂಬುದು, ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಿಂದ ತಿಳಿದುಬಂದಿದೆ.</p><p>'ವರದಿಗಾರರ ವಿಭಾಗ', 'ಮಾನಸಿಕ ಮತ್ತು ಶಸ್ತ್ರಾಸ್ತ್ರ ತರಬೇತಿ ವಿಭಾಗ' ಹಾಗೂ 'ಸೇವಾ ವಿಭಾಗ/ದಾಳಿ ತಂಡಗಳು' ಎಂಬ ಮೂರು ವಿಭಾಗಗಗಳನ್ನು ಪಿಎಫ್ಐ ಹೊಂದಿತ್ತು. ಹಿಟ್ಲಿಸ್ಟ್ನಲ್ಲಿರುವವರಿಗೆ ಸಂಬಂಧಿಸಿದ ಮಾಹಿತಿಯನ್ನು 'ವರದಿಗಾರರ ವಿಭಾಗ'ದ ಮೂಲಕ ಕಲೆಹಾಕಿತ್ತು ಎಂದು ಎನ್ಐಎ ಹೇಳಿದೆ.</p><p>ಸಮಾಜದ ಬೇರೆ ಬೇರೆ ಸಮುದಾಯದ ಪ್ರಮುಖ ವ್ಯಕ್ತಿಗಳು ಅದರಲ್ಲೂ ಹಿಂದೂ ಸಮುದಾಯಕ್ಕೆ ಸೇರಿದವರ ದಿನಚರಿ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಗುಪ್ತಚರ ಪಡೆಯಂತೆ ಕಾರ್ಯನಿರ್ವಹಿಸುತ್ತಿದ್ದ 'ವರದಿಗಾರರ ವಿಭಾಗ'ದ ಮೂಲಕ ಪಿಎಫ್ಐ ಕಲೆಹಾಕಿತ್ತು ಎಂದಿದೆ.</p><p>2022ರಲ್ಲಿ ನಡೆದ ಕೆ.ಶ್ರೀನಿವಾಸನ್ ಅವರ ಕೊಲೆ ಪ್ರಕರಣದ ಆರೋಪಿಗಳು ಜಾಮೀನು ಅರ್ಜಿ ವಜಾ ಗೊಳಿಸಿರುವ ಎನ್ಐಎ ವಿಶೇಷ ನ್ಯಾಯಾಲಯದ ಆದೇಶದಲ್ಲಿಯೂ, ಈ ವರದಿಯಲ್ಲಿನ ಅಂಶಗಳನ್ನು ಉಲ್ಲೇಖಿಸಲಾಗಿದೆ.</p><p>ಆರ್ಎಸ್ಎಸ್ ನಾಯಕ ಶ್ರೀನಿವಾಸನ್ ಅವರನ್ನು ಅವರ ಅಂಗಡಿಯಲ್ಲೇ 2022ರ ಏಪ್ರಿಲ್ 16ರಂದು ಕೊಲೆ ಮಾಡಲಾಗಿತ್ತು. ಇದರ ಹಿಂದೆ ಪಿಎಫ್ಐ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು.</p><p>ಶ್ರೀನಿವಾಸನ್ ಹತ್ಯೆ ಆರೋಪಿಗಳಿಗೆ ಜಾಮೀನು ನೀಡದಂತೆ ಕೋರಿರುವ ಎನ್ಐಎ, ವಿವಿಧ ಆರೋಪಿಗಳಿಂದ ವಶಕ್ಕೆ ಪಡೆದಿರುವ ದಾಖಲೆಗಳಿಗೂ ಪಿಎಫ್ಐ ಹಿಟ್ಲಿಸ್ಟ್ನಲ್ಲಿರುವ 972 ವ್ಯಕ್ತಿಗಳ ಕುರಿತ ಮಾಹಿತಿಗೂ ಸಂಬಂಧವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.</p><p>ಪಿಎಫ್ಐ ಅನ್ನು ಕೇಂದ್ರ ಸರ್ಕಾರವು 2022ರ ಸೆಪ್ಟೆಂಬರ್ನಲ್ಲಿ ನಿಷೇಧಿಸಿತ್ತು.</p>.ಶುಭಾಂಶು ಸಾಧನೆಗೆ ತಂದೆಯ ಸಂಭ್ರಮ, ರಾಕೆಟ್ನಲ್ಲಿದ್ದ ಮಗನ ಕಂಡು ತಾಯಿ ಭಾವುಕ.ಭಾರತೀಯ ಗಗನಯಾತ್ರಿ ಶುಕ್ಲಾ ಪ್ರಯಾಣದ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ: ಮುರ್ಮು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ</strong>: ಕೇರಳದ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಸೇರಿದಂತೆ 972 ಮಂದಿ ನಿಷೇಧಿತ ಸಂಘಟನೆ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ'ದ (ಪಿಎಫ್ಐ) ಹಿಟ್ಲಿಸ್ಟ್ನಲ್ಲಿದ್ದರು ಎಂಬುದು, ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಿಂದ ತಿಳಿದುಬಂದಿದೆ.</p><p>'ವರದಿಗಾರರ ವಿಭಾಗ', 'ಮಾನಸಿಕ ಮತ್ತು ಶಸ್ತ್ರಾಸ್ತ್ರ ತರಬೇತಿ ವಿಭಾಗ' ಹಾಗೂ 'ಸೇವಾ ವಿಭಾಗ/ದಾಳಿ ತಂಡಗಳು' ಎಂಬ ಮೂರು ವಿಭಾಗಗಗಳನ್ನು ಪಿಎಫ್ಐ ಹೊಂದಿತ್ತು. ಹಿಟ್ಲಿಸ್ಟ್ನಲ್ಲಿರುವವರಿಗೆ ಸಂಬಂಧಿಸಿದ ಮಾಹಿತಿಯನ್ನು 'ವರದಿಗಾರರ ವಿಭಾಗ'ದ ಮೂಲಕ ಕಲೆಹಾಕಿತ್ತು ಎಂದು ಎನ್ಐಎ ಹೇಳಿದೆ.</p><p>ಸಮಾಜದ ಬೇರೆ ಬೇರೆ ಸಮುದಾಯದ ಪ್ರಮುಖ ವ್ಯಕ್ತಿಗಳು ಅದರಲ್ಲೂ ಹಿಂದೂ ಸಮುದಾಯಕ್ಕೆ ಸೇರಿದವರ ದಿನಚರಿ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಗುಪ್ತಚರ ಪಡೆಯಂತೆ ಕಾರ್ಯನಿರ್ವಹಿಸುತ್ತಿದ್ದ 'ವರದಿಗಾರರ ವಿಭಾಗ'ದ ಮೂಲಕ ಪಿಎಫ್ಐ ಕಲೆಹಾಕಿತ್ತು ಎಂದಿದೆ.</p><p>2022ರಲ್ಲಿ ನಡೆದ ಕೆ.ಶ್ರೀನಿವಾಸನ್ ಅವರ ಕೊಲೆ ಪ್ರಕರಣದ ಆರೋಪಿಗಳು ಜಾಮೀನು ಅರ್ಜಿ ವಜಾ ಗೊಳಿಸಿರುವ ಎನ್ಐಎ ವಿಶೇಷ ನ್ಯಾಯಾಲಯದ ಆದೇಶದಲ್ಲಿಯೂ, ಈ ವರದಿಯಲ್ಲಿನ ಅಂಶಗಳನ್ನು ಉಲ್ಲೇಖಿಸಲಾಗಿದೆ.</p><p>ಆರ್ಎಸ್ಎಸ್ ನಾಯಕ ಶ್ರೀನಿವಾಸನ್ ಅವರನ್ನು ಅವರ ಅಂಗಡಿಯಲ್ಲೇ 2022ರ ಏಪ್ರಿಲ್ 16ರಂದು ಕೊಲೆ ಮಾಡಲಾಗಿತ್ತು. ಇದರ ಹಿಂದೆ ಪಿಎಫ್ಐ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು.</p><p>ಶ್ರೀನಿವಾಸನ್ ಹತ್ಯೆ ಆರೋಪಿಗಳಿಗೆ ಜಾಮೀನು ನೀಡದಂತೆ ಕೋರಿರುವ ಎನ್ಐಎ, ವಿವಿಧ ಆರೋಪಿಗಳಿಂದ ವಶಕ್ಕೆ ಪಡೆದಿರುವ ದಾಖಲೆಗಳಿಗೂ ಪಿಎಫ್ಐ ಹಿಟ್ಲಿಸ್ಟ್ನಲ್ಲಿರುವ 972 ವ್ಯಕ್ತಿಗಳ ಕುರಿತ ಮಾಹಿತಿಗೂ ಸಂಬಂಧವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.</p><p>ಪಿಎಫ್ಐ ಅನ್ನು ಕೇಂದ್ರ ಸರ್ಕಾರವು 2022ರ ಸೆಪ್ಟೆಂಬರ್ನಲ್ಲಿ ನಿಷೇಧಿಸಿತ್ತು.</p>.ಶುಭಾಂಶು ಸಾಧನೆಗೆ ತಂದೆಯ ಸಂಭ್ರಮ, ರಾಕೆಟ್ನಲ್ಲಿದ್ದ ಮಗನ ಕಂಡು ತಾಯಿ ಭಾವುಕ.ಭಾರತೀಯ ಗಗನಯಾತ್ರಿ ಶುಕ್ಲಾ ಪ್ರಯಾಣದ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ: ಮುರ್ಮು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>