<p><strong>ಪಿತೋರಗಢ (ಉತ್ತರಾಖಂಡ):</strong> ಆದಿ ಕೈಲಾಸ ಯಾತ್ರೆ ಶುಕ್ರವಾರ ಆರಂಭವಾಗಿದ್ದು, ಯಾತ್ರಿಕರ ಮೊದಲ ಬ್ಯಾಚ್ ಬೆಟ್ಟ ಹತ್ತಿ ದೇವರ ದರ್ಶನಕ್ಕೆ ತೆರಳಿದೆ.</p>.<p>ಶಿವ–ಪಾರ್ವತಿ ದೇಗುಲ ಇದಾಗಿದ್ದು, ಬೆಟ್ಟದಿಂದ 2 ಕಿ.ಮೀ ದೂರದಲ್ಲಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ರಂಗ್ ಸಮುದಾಯದವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ದೇಗುಲವನ್ನು ತೆರೆದಿದ್ದರು.</p>.<p>ದೇವಾಲಯದ ಬಾಗಿಲು ತೆರೆಯುವಾಗ 150 ಮಂದಿ ರಂಗ್ ಗ್ರಾಮಸ್ಥರು ಸೇರಿದಂತೆ 200ಕ್ಕೂ ಹೆಚ್ಚು ಭಕ್ತರು ಹಾಜರಿದ್ದರು ಎಂದು ಉತ್ತರಾಖಂಡದ ಪಿಥೋರಗಢ ಪಟ್ಟಣದ ಭಕ್ತ ಕಾರ್ತಿಕ್ ಭಾಟಿಯಾ ತಿಳಿಸಿದ್ದಾರೆ.</p>.<p>ವ್ಯಾಸ ಕಣಿವೆಯ ಕುಟಿ ಗ್ರಾಮದ ಅರ್ಚಕರಾದ ಗೋಪಾಲ್ ಸಿಂಗ್ ಕುಟಿಯಾಲ್ ಮತ್ತು ವೀರೇಂದ್ರ ಸಿಂಗ್ ಕುಟಿಯಾಲ್ ಅವರು ರಂಗ್ ಬುಡಕಟ್ಟು ಸಂಪ್ರದಾದಂತೆ ದೇವಾಲಯದ ಬಾಗಿಲು ತೆರೆದರು ಎಂದು ಧಾರ್ಚುಲಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮಂಜಿತ್ ಸಿಂಗ್ ತಿಳಿಸಿದ್ದಾರೆ.</p>.<p>ಈ ವೇಳೆ ಪುರೋಹಿತರು ಸಾಂಪ್ರದಾಯಿಕ ಉಡುಪು ಧರಿಸಿದ್ದರು. ವ್ಯಾಸ ಕಣಿವೆಯ ರಂಗ್ ಹಳ್ಳಿಗಳ ಜನ ಶಿವ ಮತ್ತು ಪಾರ್ವತಿ ದೇವಿಯನ್ನು ಸ್ತುತಿಸುವ ಜಾನಪದ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ವ್ಯಾಸ ಕಣಿವೆಯ 6 ಹಳ್ಳಿಗಳ ಜನ ಸೇರಿದಂತೆ 1,500ಕ್ಕೂ ಹೆಚ್ಚು ಭಕ್ತರು ಉಪಸ್ಥಿತರಿದ್ದರು ಎಂದು ಎಸ್ಡಿಎಂ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಿತೋರಗಢ (ಉತ್ತರಾಖಂಡ):</strong> ಆದಿ ಕೈಲಾಸ ಯಾತ್ರೆ ಶುಕ್ರವಾರ ಆರಂಭವಾಗಿದ್ದು, ಯಾತ್ರಿಕರ ಮೊದಲ ಬ್ಯಾಚ್ ಬೆಟ್ಟ ಹತ್ತಿ ದೇವರ ದರ್ಶನಕ್ಕೆ ತೆರಳಿದೆ.</p>.<p>ಶಿವ–ಪಾರ್ವತಿ ದೇಗುಲ ಇದಾಗಿದ್ದು, ಬೆಟ್ಟದಿಂದ 2 ಕಿ.ಮೀ ದೂರದಲ್ಲಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ರಂಗ್ ಸಮುದಾಯದವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ದೇಗುಲವನ್ನು ತೆರೆದಿದ್ದರು.</p>.<p>ದೇವಾಲಯದ ಬಾಗಿಲು ತೆರೆಯುವಾಗ 150 ಮಂದಿ ರಂಗ್ ಗ್ರಾಮಸ್ಥರು ಸೇರಿದಂತೆ 200ಕ್ಕೂ ಹೆಚ್ಚು ಭಕ್ತರು ಹಾಜರಿದ್ದರು ಎಂದು ಉತ್ತರಾಖಂಡದ ಪಿಥೋರಗಢ ಪಟ್ಟಣದ ಭಕ್ತ ಕಾರ್ತಿಕ್ ಭಾಟಿಯಾ ತಿಳಿಸಿದ್ದಾರೆ.</p>.<p>ವ್ಯಾಸ ಕಣಿವೆಯ ಕುಟಿ ಗ್ರಾಮದ ಅರ್ಚಕರಾದ ಗೋಪಾಲ್ ಸಿಂಗ್ ಕುಟಿಯಾಲ್ ಮತ್ತು ವೀರೇಂದ್ರ ಸಿಂಗ್ ಕುಟಿಯಾಲ್ ಅವರು ರಂಗ್ ಬುಡಕಟ್ಟು ಸಂಪ್ರದಾದಂತೆ ದೇವಾಲಯದ ಬಾಗಿಲು ತೆರೆದರು ಎಂದು ಧಾರ್ಚುಲಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮಂಜಿತ್ ಸಿಂಗ್ ತಿಳಿಸಿದ್ದಾರೆ.</p>.<p>ಈ ವೇಳೆ ಪುರೋಹಿತರು ಸಾಂಪ್ರದಾಯಿಕ ಉಡುಪು ಧರಿಸಿದ್ದರು. ವ್ಯಾಸ ಕಣಿವೆಯ ರಂಗ್ ಹಳ್ಳಿಗಳ ಜನ ಶಿವ ಮತ್ತು ಪಾರ್ವತಿ ದೇವಿಯನ್ನು ಸ್ತುತಿಸುವ ಜಾನಪದ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ವ್ಯಾಸ ಕಣಿವೆಯ 6 ಹಳ್ಳಿಗಳ ಜನ ಸೇರಿದಂತೆ 1,500ಕ್ಕೂ ಹೆಚ್ಚು ಭಕ್ತರು ಉಪಸ್ಥಿತರಿದ್ದರು ಎಂದು ಎಸ್ಡಿಎಂ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>