<p><strong>ಕೊಹಿಮಾ</strong>: 2015ರ ಒಪ್ಪಂದವಾಗಿ ಒಂಬತ್ತು ವರ್ಷಗಳು ಕಳೆದರೂ ನಾಗಾಲ್ಯಾಂಡ್ನ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಏನನ್ನೂ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದರು.</p>.<p>ಮಣಿಪುರದಿಂದ ಮುಂಬೈವರೆಗೆ ‘ಭಾರತ ಜೋಡೊ ನ್ಯಾಯ ಯಾತ್ರೆ’ ಕೈಗೊಂಡಿರುವ ಅವರು, ರಾಜ್ಯದ ಮೊಕೊಕ್ಚುಂಗ್ ಪಟ್ಟಣದಲ್ಲಿ ರ್ಯಾಲಿ ನಡೆಸಿದರು. ನಾಗಾ ಜನರ ವಿಶ್ವಾಸ ಸಂಪಾದಿಸದೇ ಮತ್ತು ಅವರ ಜೊತೆ ಚರ್ಚಿಸದೇ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದರು.</p>.<p>ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ನಿಮ್ಮ ಬಳಿ ಪರಿಹಾರವಿಲ್ಲದಿದ್ದರೆ, ಪರಿಹಾರ ಇದೆ ಎಂದು ಸುಳ್ಳು ಹೇಳಬೇಡಿ. ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿ’ ಎಂದು ಹೇಳಿದರು.</p>.<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂಬತ್ತು ವರ್ಷಗಳ ಹಿಂದೆ ಮೋದಿ ಕೇವಲ ಪೊಳ್ಳು ಭರವಸೆ ನೀಡಿದ್ದರು ಎಂದರು. ದಶಕಗಳಷ್ಟು ಹಳೆಯದಾದ ನಾಗಾ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದರು.</p>.<p>ಪರಸ್ಪರರ ಉಡುಗೆ ತೊಡುಗೆ, ಸಂಸ್ಕೃತಿ, ಆಹಾರ ಪದ್ಧತಿ, ಧಾರ್ಮಿಕ ಆಚರಣೆಗಳನ್ನು ಎಲ್ಲಾ ಭಾರತೀಯರೂ ಗೌರವಿಸಬೇಕು. ಆದರೆ ಅಂಥ ಸಂಸ್ಕೃತಿಗಳ ಮೇಲೆ ಬಿಜೆಪಿ ಮತ್ತು ಆರ್ಎಸ್ಎಸ್ ದಾಳಿ ನಡೆಸುತ್ತಿವೆ ಮತ್ತು ಅಗೌರವ ತೋರುತ್ತವೆ ಎಂದರು.</p>.<p>ಸಂಘರ್ಷಪೀಡಿತ ಮಣಿಪುರಕ್ಕೆ ಪ್ರಧಾನಿ ಭೇಟಿ ನೀಡದ ಕುರಿತು ನನಗೆ ನಾಚಿಕೆ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ನಾಗಾಲ್ಯಾಂಡ್ ಅನ್ನು ಭಾರತದಿಂದ ಬೇರ್ಪಡಿಸುವ ನಿಟ್ಟಿನಲ್ಲಿ 1947ರಿಂದಲೇ ಬಂಡಾಯ ಆರಂಭವಾಗಿದೆ. ಬಿಕ್ಕಟ್ಟು ಪರಿಹರಿಸುವ ದಿಸೆಯಲ್ಲಿ ನಾಗಾ ಬಂಡುಕೋರರ ಸಂಘಟನೆಯಾದ ‘ನ್ಯಾಷನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್’ (ಎನ್ಎಸ್ಸಿಎನ್–ಐಎಂ) ಜೊತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2015ರಲ್ಲಿ ಒಪ್ಪಂದಕ್ಕೆ ಸಹಿ ಮಾಡಿತ್ತು. </p>.<div><blockquote>ಉತ್ತಮ ಸೌಲಭ್ಯಗಳಿರುವ ರಾಜ್ಯಗಳ ಯುವಜನರ ಜೊತೆ ನಾಗಾಲ್ಯಾಂಡ್ ಯುವಕರು ಹೇಗೆ ಸ್ಪರ್ಧಿಸುತ್ತಾರೆ. ಇಂಥ ರಸ್ತೆಗಳು ಇಲ್ಲಿಯ ಜನರ ಉತ್ತಮ ಭವಿಷ್ಯಕ್ಕೆ ದಾರಿಯಾಗುತ್ತವೆ ಎಂದು ಹೇಗೆ ನಿರೀಕ್ಷಿಸುವುದು? </blockquote><span class="attribution">ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ</span></div>. <p>- </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಹಿಮಾ</strong>: 2015ರ ಒಪ್ಪಂದವಾಗಿ ಒಂಬತ್ತು ವರ್ಷಗಳು ಕಳೆದರೂ ನಾಗಾಲ್ಯಾಂಡ್ನ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಏನನ್ನೂ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದರು.</p>.<p>ಮಣಿಪುರದಿಂದ ಮುಂಬೈವರೆಗೆ ‘ಭಾರತ ಜೋಡೊ ನ್ಯಾಯ ಯಾತ್ರೆ’ ಕೈಗೊಂಡಿರುವ ಅವರು, ರಾಜ್ಯದ ಮೊಕೊಕ್ಚುಂಗ್ ಪಟ್ಟಣದಲ್ಲಿ ರ್ಯಾಲಿ ನಡೆಸಿದರು. ನಾಗಾ ಜನರ ವಿಶ್ವಾಸ ಸಂಪಾದಿಸದೇ ಮತ್ತು ಅವರ ಜೊತೆ ಚರ್ಚಿಸದೇ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದರು.</p>.<p>ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ನಿಮ್ಮ ಬಳಿ ಪರಿಹಾರವಿಲ್ಲದಿದ್ದರೆ, ಪರಿಹಾರ ಇದೆ ಎಂದು ಸುಳ್ಳು ಹೇಳಬೇಡಿ. ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿ’ ಎಂದು ಹೇಳಿದರು.</p>.<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂಬತ್ತು ವರ್ಷಗಳ ಹಿಂದೆ ಮೋದಿ ಕೇವಲ ಪೊಳ್ಳು ಭರವಸೆ ನೀಡಿದ್ದರು ಎಂದರು. ದಶಕಗಳಷ್ಟು ಹಳೆಯದಾದ ನಾಗಾ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದರು.</p>.<p>ಪರಸ್ಪರರ ಉಡುಗೆ ತೊಡುಗೆ, ಸಂಸ್ಕೃತಿ, ಆಹಾರ ಪದ್ಧತಿ, ಧಾರ್ಮಿಕ ಆಚರಣೆಗಳನ್ನು ಎಲ್ಲಾ ಭಾರತೀಯರೂ ಗೌರವಿಸಬೇಕು. ಆದರೆ ಅಂಥ ಸಂಸ್ಕೃತಿಗಳ ಮೇಲೆ ಬಿಜೆಪಿ ಮತ್ತು ಆರ್ಎಸ್ಎಸ್ ದಾಳಿ ನಡೆಸುತ್ತಿವೆ ಮತ್ತು ಅಗೌರವ ತೋರುತ್ತವೆ ಎಂದರು.</p>.<p>ಸಂಘರ್ಷಪೀಡಿತ ಮಣಿಪುರಕ್ಕೆ ಪ್ರಧಾನಿ ಭೇಟಿ ನೀಡದ ಕುರಿತು ನನಗೆ ನಾಚಿಕೆ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ನಾಗಾಲ್ಯಾಂಡ್ ಅನ್ನು ಭಾರತದಿಂದ ಬೇರ್ಪಡಿಸುವ ನಿಟ್ಟಿನಲ್ಲಿ 1947ರಿಂದಲೇ ಬಂಡಾಯ ಆರಂಭವಾಗಿದೆ. ಬಿಕ್ಕಟ್ಟು ಪರಿಹರಿಸುವ ದಿಸೆಯಲ್ಲಿ ನಾಗಾ ಬಂಡುಕೋರರ ಸಂಘಟನೆಯಾದ ‘ನ್ಯಾಷನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್’ (ಎನ್ಎಸ್ಸಿಎನ್–ಐಎಂ) ಜೊತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2015ರಲ್ಲಿ ಒಪ್ಪಂದಕ್ಕೆ ಸಹಿ ಮಾಡಿತ್ತು. </p>.<div><blockquote>ಉತ್ತಮ ಸೌಲಭ್ಯಗಳಿರುವ ರಾಜ್ಯಗಳ ಯುವಜನರ ಜೊತೆ ನಾಗಾಲ್ಯಾಂಡ್ ಯುವಕರು ಹೇಗೆ ಸ್ಪರ್ಧಿಸುತ್ತಾರೆ. ಇಂಥ ರಸ್ತೆಗಳು ಇಲ್ಲಿಯ ಜನರ ಉತ್ತಮ ಭವಿಷ್ಯಕ್ಕೆ ದಾರಿಯಾಗುತ್ತವೆ ಎಂದು ಹೇಗೆ ನಿರೀಕ್ಷಿಸುವುದು? </blockquote><span class="attribution">ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ</span></div>. <p>- </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>