ಮಂಗಳವಾರ ಪಿಎಂಎವೈ–ಯು ಯೋಜನೆಯ 75 ಸಾವಿರ ಫಲಾನುಭವಿಗಳಿಗೆ ವರ್ಚುವಲ್ ರೂಪದಲ್ಲಿ ಕೀಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ‘2017ಕ್ಕೂ ಹಿಂದೆ, ಉತ್ತರ ಪ್ರದೇಶಕ್ಕೆ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ಬಡವರಿಗೆ ಮನೆ ನಿರ್ಮಿಸಿಕೊಡಲು ₹18 ಸಾವಿರ ಕೋಟಿ ಮಂಜೂರು ಮಾಡಿತ್ತು. ಆದರೆ, ಆ ಸರ್ಕಾರ 18 ಮನೆಗಳನ್ನೂ ನಿರ್ಮಾಣ ಮಾಡಲಿಲ್ಲ‘ ಎಂದು ಆರೋಪಿಸಿದರು.