ನವದೆಹಲಿ: ಹೊಸ ಶಿಕ್ಷಣ ನೀತಿಯು ಉದ್ಯೋಗ ಹುಡುಕುವವರನ್ನು ಸಿದ್ಧಪಡಿಸುವ ಬದಲು ಉದ್ಯೋಗ ಸೃಜಿಸುವವರ ಸೃಷ್ಟಿಗೆ ಒತ್ತು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್’ ಉದ್ದೇಶಿಸಿ ಮಾತನಾಡಿದ ಅವರು, ‘ಅಂತರ-ಶಿಸ್ತಿನ ಅಧ್ಯಯನವು ವಿದ್ಯಾರ್ಥಿಯು ಕಲಿಯಲು ಬಯಸುವ ವಿಷಯಗಳ ಮೇಲೆ ಕೇಂದ್ರೀಕರಿಸಿದೆ ಎಂಬುದನ್ನು ಹೊಸ ಶಿಕ್ಷಣ ನೀತಿ ಖಚಿತಪಡಿಸುತ್ತದೆ’ ಎಂದು ಹೇಳಿದ್ದಾರೆ.
ಬಡವರಿಗೆ ಉತ್ತಮ ಜೀವನ ಕಲ್ಪಿಸುವ ಸಲುವಾಗಿ ‘ಸುಲಭ ಜೀವನ ವಿಧಾನ’ ಗುರಿಯನ್ನು ಸಾಧಿಸುವಲ್ಲಿ ಯುವಕರ ಪಾತ್ರ ಬಹುಮುಖ್ಯ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋದಿ ಹೇಳಿದರು.