<p><strong>ನವದೆಹಲಿ:</strong> ಪ್ರಧಾನಿ ಕಾರ್ಯಾಲಯವನ್ನು ರೈಸಿನಾ ಹಿಲ್ನ ಸೌತ್ ಬ್ಲಾಕ್ನಿಂದ ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥಕ್ಕೆ ಸ್ಥಳಾಂತರಿಸಿದ್ದನ್ನು ಶ್ಲಾಘಿಸಿ ಕೇಂದ್ರ ಸಚಿವ ಸಂಪುಟ ನಿರ್ಣಯ ಮಾಡಿದೆ. ಇದು ಭೂತ ಹಾಗೂ ಭವಿಷ್ಯದ ಸಂಗಮ ಎಂದು ಬಣ್ಣಿಸಿದೆ.</p>.ಸೇವಾ ತೀರ್ಥ: ಪ್ರಧಾನಿ ಕಾರ್ಯಾಲಯದ ಹೊಸ ವಿಳಾಸ; 2ಲಕ್ಷ ಚದರಡಿಯಲ್ಲಿ ಏನೆಲ್ಲಾ ಇವೆ?.<p>ಶುಕ್ರವಾರ ಸೌತ್ ಬ್ಲಾಕ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.</p><p>‘ಇದು ಕೇವಲ ಸ್ಥಳಾಂತರವಲ್ಲ, ಭೂತ ಹಾಗೂ ಭವಿಷ್ಯದ ಸಂಗಮ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸಚಿವ ಸಂಪುಟದ ನಿರ್ಧಾರಗಳನ್ನು ಮಾಧ್ಯಮಗಳಿಗೆ ವಿವರಿಸುವಾಗ ಹೇಳಿದ್ದಾರೆ.</p>.ಸೇವಾ ತೀರ್ಥ: ಪ್ರಧಾನಿ ಕಾರ್ಯಾಲಯದ ಹೊಸ ವಿಳಾಸ; 2ಲಕ್ಷ ಚದರಡಿಯಲ್ಲಿ ಏನೆಲ್ಲಾ ಇವೆ?.<p>ಭಾರತದಲ್ಲಿ ತಮ್ಮ ಹಿಡಿತ ಗಟ್ಟಿಮಾಡಿಕೊಳ್ಳಲು ಬ್ರಿಟೀಷರು ಸೌತ್ ಬ್ಲಾಕ್ ಹಾಗೂ ನಾರ್ತ್ ಬ್ಲಾಕ್ ನಿರ್ಮಿಸಿದ್ದರು. ಸ್ವಾತಂತ್ರ್ಯ ಬಳಿಕ ಬಂದ ಸರ್ಕಾರಗಳು ಅದೇ ಕಟ್ಟಡಗಳನ್ನು ಬಳಕೆ ಮಾಡುವುದನ್ನು ಮುಂದುವರಿಸಿದವು ಎಂದು ಅವರು ಹೇಳಿದ್ದಾರೆ.</p><p>‘ಹೊಸ ಪ್ರಧಾನಿ ಕಾರ್ಯಾಲಯ ಹಾಗೂ ಕೇಂದ್ರ ಸಚಿವಾಲಯದ ಕಟ್ಟಡಗಳು ವಿಕಸಿತ ಭಾರತದ ಪ್ರಯಾಣದೆಡೆಗೆ ಪ್ರಮುಖ ಮೈಲಿಗಲ್ಲು. ಇದು ನಾಗರಿಕ ಕೇಂದ್ರಿತವಾದ ಆಡಳಿತ ಹಾಗೂ ರಾಷ್ಟ್ರದ ಪ್ರಗತಿಗೆ ಸರ್ಕಾರದ ಬಾಧ್ಯತೆಯ ಪ್ರತೀಕ’ ಎಂದು ಶುಕ್ರವಾರ ಪ್ರಧಾನಿ ಹೇಳಿದ್ದರು.</p><p>ಶುಕ್ರವಾರ ಪ್ರಧಾನಿ ಕಚೇರಿ ‘ಸೇವಾ ತೀರ್ಥ’ಕ್ಕೆ ಸ್ಥಳಾಂತರಗೊಂಡಿತ್ತು.</p>.ಪಿಎಂಒ ಈಗ ‘ಸೇವಾ ತೀರ್ಥ’: ಮಹಿಳೆ, ರೈತರು, ಯುವ ಜನರ ಕಲ್ಯಾಣಕ್ಕೆ ಹಲವು ನಿರ್ಣಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪ್ರಧಾನಿ ಕಾರ್ಯಾಲಯವನ್ನು ರೈಸಿನಾ ಹಿಲ್ನ ಸೌತ್ ಬ್ಲಾಕ್ನಿಂದ ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥಕ್ಕೆ ಸ್ಥಳಾಂತರಿಸಿದ್ದನ್ನು ಶ್ಲಾಘಿಸಿ ಕೇಂದ್ರ ಸಚಿವ ಸಂಪುಟ ನಿರ್ಣಯ ಮಾಡಿದೆ. ಇದು ಭೂತ ಹಾಗೂ ಭವಿಷ್ಯದ ಸಂಗಮ ಎಂದು ಬಣ್ಣಿಸಿದೆ.</p>.ಸೇವಾ ತೀರ್ಥ: ಪ್ರಧಾನಿ ಕಾರ್ಯಾಲಯದ ಹೊಸ ವಿಳಾಸ; 2ಲಕ್ಷ ಚದರಡಿಯಲ್ಲಿ ಏನೆಲ್ಲಾ ಇವೆ?.<p>ಶುಕ್ರವಾರ ಸೌತ್ ಬ್ಲಾಕ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.</p><p>‘ಇದು ಕೇವಲ ಸ್ಥಳಾಂತರವಲ್ಲ, ಭೂತ ಹಾಗೂ ಭವಿಷ್ಯದ ಸಂಗಮ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸಚಿವ ಸಂಪುಟದ ನಿರ್ಧಾರಗಳನ್ನು ಮಾಧ್ಯಮಗಳಿಗೆ ವಿವರಿಸುವಾಗ ಹೇಳಿದ್ದಾರೆ.</p>.ಸೇವಾ ತೀರ್ಥ: ಪ್ರಧಾನಿ ಕಾರ್ಯಾಲಯದ ಹೊಸ ವಿಳಾಸ; 2ಲಕ್ಷ ಚದರಡಿಯಲ್ಲಿ ಏನೆಲ್ಲಾ ಇವೆ?.<p>ಭಾರತದಲ್ಲಿ ತಮ್ಮ ಹಿಡಿತ ಗಟ್ಟಿಮಾಡಿಕೊಳ್ಳಲು ಬ್ರಿಟೀಷರು ಸೌತ್ ಬ್ಲಾಕ್ ಹಾಗೂ ನಾರ್ತ್ ಬ್ಲಾಕ್ ನಿರ್ಮಿಸಿದ್ದರು. ಸ್ವಾತಂತ್ರ್ಯ ಬಳಿಕ ಬಂದ ಸರ್ಕಾರಗಳು ಅದೇ ಕಟ್ಟಡಗಳನ್ನು ಬಳಕೆ ಮಾಡುವುದನ್ನು ಮುಂದುವರಿಸಿದವು ಎಂದು ಅವರು ಹೇಳಿದ್ದಾರೆ.</p><p>‘ಹೊಸ ಪ್ರಧಾನಿ ಕಾರ್ಯಾಲಯ ಹಾಗೂ ಕೇಂದ್ರ ಸಚಿವಾಲಯದ ಕಟ್ಟಡಗಳು ವಿಕಸಿತ ಭಾರತದ ಪ್ರಯಾಣದೆಡೆಗೆ ಪ್ರಮುಖ ಮೈಲಿಗಲ್ಲು. ಇದು ನಾಗರಿಕ ಕೇಂದ್ರಿತವಾದ ಆಡಳಿತ ಹಾಗೂ ರಾಷ್ಟ್ರದ ಪ್ರಗತಿಗೆ ಸರ್ಕಾರದ ಬಾಧ್ಯತೆಯ ಪ್ರತೀಕ’ ಎಂದು ಶುಕ್ರವಾರ ಪ್ರಧಾನಿ ಹೇಳಿದ್ದರು.</p><p>ಶುಕ್ರವಾರ ಪ್ರಧಾನಿ ಕಚೇರಿ ‘ಸೇವಾ ತೀರ್ಥ’ಕ್ಕೆ ಸ್ಥಳಾಂತರಗೊಂಡಿತ್ತು.</p>.ಪಿಎಂಒ ಈಗ ‘ಸೇವಾ ತೀರ್ಥ’: ಮಹಿಳೆ, ರೈತರು, ಯುವ ಜನರ ಕಲ್ಯಾಣಕ್ಕೆ ಹಲವು ನಿರ್ಣಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>