<p><strong>ತಿರುಪ್ಪುರ:</strong> ತಂದೆ ಹಾಗೂ ಮಗನ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದ ವಿಶೇಷ ಸಬ್ ಇನ್ಸ್ಟೆಕ್ಟರ್ ಹತ್ಯೆಯಾಗಿದ್ದಾರೆ.</p><p>ತಮಿಳುನಾಡಿನ ಗುಡಿಮಂಗಲಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಎಂ. ಷಣ್ಮುಗವೇಲು (57) ಮೃತ ಪೊಲೀಸ್ ಅಧಿಕಾರಿ.</p><p>ಇವರು ತಿರುಪ್ಪುರ ಜಿಲ್ಲೆಯ ಗುಡಿಮಂಗಲಮ್ ಠಾಣೆಯಲ್ಲಿ ವಿಶೇಷ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ. 5ರಂದು ಷಣ್ಮುಗವೇಲು ಮತ್ತು ಸಶಸ್ತ್ರ ಪೊಲೀಸ್ ದಳದ ಕಾನ್ಸ್ಟೆಬಲ್ ಅಳಗುರಾಜ ಅವರು ಮಂಗಳವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಮದ್ಯ ಸೇವಿಸಿದ್ದ ಇಬ್ಬರು ವ್ಯಕ್ತಿಗಳ ನಡುವೆ ಜಗಳ ನಡೆಯುತ್ತಿತ್ತು.</p><p>ತಂದೆ ಹಾಗೂ ಮಗನ ಈ ಜಗಳ ಬಿಡಿಸಲು ಷಣ್ಮುಗವೇಲು ಮತ್ತು ಅಳಗುರಾಜ ಮುಂದಾದರು. ಈ ಸಂದರ್ಭದಲ್ಲಿ ಜಗಳ ಆಡುತ್ತಿದ್ದವರಲ್ಲಿ ವ್ಯಕ್ತಿಯೊಬ್ಬ ಕುಡುಗೋಲಿನಿಂದ ಇವರ ಮೇಲೆ ಹಲ್ಲೆ ನಡೆಸಿದ್ದಾನೆ. ಷಣ್ಮುಗವೇಲು ಮೃತಪಟ್ಟಿದ್ದಾರೆ. ಕಾನ್ಸ್ಟೆಬಲ್ ದಾಳಿಯಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪ್ಪುರ:</strong> ತಂದೆ ಹಾಗೂ ಮಗನ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದ ವಿಶೇಷ ಸಬ್ ಇನ್ಸ್ಟೆಕ್ಟರ್ ಹತ್ಯೆಯಾಗಿದ್ದಾರೆ.</p><p>ತಮಿಳುನಾಡಿನ ಗುಡಿಮಂಗಲಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಎಂ. ಷಣ್ಮುಗವೇಲು (57) ಮೃತ ಪೊಲೀಸ್ ಅಧಿಕಾರಿ.</p><p>ಇವರು ತಿರುಪ್ಪುರ ಜಿಲ್ಲೆಯ ಗುಡಿಮಂಗಲಮ್ ಠಾಣೆಯಲ್ಲಿ ವಿಶೇಷ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ. 5ರಂದು ಷಣ್ಮುಗವೇಲು ಮತ್ತು ಸಶಸ್ತ್ರ ಪೊಲೀಸ್ ದಳದ ಕಾನ್ಸ್ಟೆಬಲ್ ಅಳಗುರಾಜ ಅವರು ಮಂಗಳವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಮದ್ಯ ಸೇವಿಸಿದ್ದ ಇಬ್ಬರು ವ್ಯಕ್ತಿಗಳ ನಡುವೆ ಜಗಳ ನಡೆಯುತ್ತಿತ್ತು.</p><p>ತಂದೆ ಹಾಗೂ ಮಗನ ಈ ಜಗಳ ಬಿಡಿಸಲು ಷಣ್ಮುಗವೇಲು ಮತ್ತು ಅಳಗುರಾಜ ಮುಂದಾದರು. ಈ ಸಂದರ್ಭದಲ್ಲಿ ಜಗಳ ಆಡುತ್ತಿದ್ದವರಲ್ಲಿ ವ್ಯಕ್ತಿಯೊಬ್ಬ ಕುಡುಗೋಲಿನಿಂದ ಇವರ ಮೇಲೆ ಹಲ್ಲೆ ನಡೆಸಿದ್ದಾನೆ. ಷಣ್ಮುಗವೇಲು ಮೃತಪಟ್ಟಿದ್ದಾರೆ. ಕಾನ್ಸ್ಟೆಬಲ್ ದಾಳಿಯಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>