<p class="title"><strong>ಲಖನೌ</strong>: ಮುಸ್ಲಿಂ ಸಮುದಾಯ ಹಾಗೂ ಸಮಾಜವಾದಿ ಪಕ್ಷವನ್ನು (ಎಸ್ಪಿ) ಉದ್ದೇಶಿಸಿ ‘ಅಬ್ಬಾ ಜಾನ್ ಎಂದು ಕರೆಯಲಾಗುವ ಈ ಜನರು’ ಎಂದು ವಾಗ್ದಾಳಿ ನಡೆಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ರಾಜಕೀಯ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.</p>.<p class="title">ಕುಶಿನಗರದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆದಿತ್ಯನಾಥ್ ಅವರು, ‘2017ಕ್ಕಿಂತ ಮೊದಲು ಜನರು ಈಗಿನಂತೆ ಪಡಿತರ ಪಡೆಯುತ್ತಿರಲಿಲ್ಲ. ಆಗ ‘ಅಬ್ಬಾ ಜಾನ್’ ಎಂದು ಕರೆಯಲಾಗುತ್ತಿದ್ದ ಜನರು ಈ ಪಡಿತರವನ್ನು ಜೀರ್ಣಿಸಿಕೊಳ್ಳುತ್ತಿದ್ದರು’ ಎಂದಿದ್ದರು.</p>.<p class="title">‘ಕುಶಿನಗರದ ಪಡಿತರ ಧಾನ್ಯವು ಆಗ ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ರವಾನೆಯಾಗುತ್ತಿತ್ತು. ಇವತ್ತು ಯಾರಾದರೂ ಬಡಜನರ ಪಡಿತರವನ್ನು ಕಬಳಿಸಿದರೆ ಅಂಥವರನ್ನು ಜೈಲಿಗೆ ಕಳುಹಿಸಲಾಗುತ್ತದೆ’ ಎಂದೂ ಅವರು ಹೇಳಿದ್ದರು.</p>.<p class="title">ಉರ್ದುವಿನಲ್ಲಿ ತಂದೆಯನ್ನು ‘ಅಬ್ಬಾ ಜಾನ್’ ಎಂದು ಕರೆಯಲಾಗುತ್ತದೆ.</p>.<p class="bodytext">ಆದಿತ್ಯನಾಥ್ ಅವರ ‘ಅಬ್ಬಾ ಜಾನ್’ ಎಂಬ ಪದ ಪ್ರಯೋಗಕ್ಕೆ ನ್ಯಾಷನಲ್ ಕಾನ್ಫರೆನ್ಸ್ನ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಟ್ವಿಟರ್ನಲ್ಲಿ ಟೀಕಿಸಿದ್ದರು.</p>.<p class="bodytext">‘ಬಿಜೆಪಿಯು ಕೋಮುವಾದದ ಕಾರ್ಯತಂತ್ರ (ಅಜೆಂಡಾ) ಬಿಟ್ಟು ಯಾವುದೇ ಚುನಾವಣೆಯನ್ನು ನಡೆಸುವುದಿಲ್ಲ. ಹಿಂದೂಗಳ ಪಡಿತರವನ್ನು ಮುಸ್ಲಿಮರು ತಿಂದಿದ್ದಾರೆ ಎಂದು ಹೇಳುವ ಮೂಲಕ ಆದಿತ್ಯನಾಥ್ ಮುಸ್ಲಿಮರ ವಿರುದ್ಧದ ತಮ್ಮ ದ್ವೇಷವನ್ನು ಕಾರಿದ್ದಾರೆ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.</p>.<p class="bodytext">ಸಮಾಜವಾದಿ ಪಕ್ಷದ ಶಾಸಕ ಅಶುತೋಷ್ ಸಿನ್ಹಾ ಅವರು, ‘ಮುಖ್ಯಮಂತ್ರಿಯಂಥ ಉನ್ನತ ಸ್ಥಾನದಲ್ಲಿರುವ ಯೋಗಿ ಆದಿತ್ಯನಾಥ್ ಅವರು ಇಂಥ ಅಸಾವಿಂಧಾನಿಕ ಪದ ಪ್ರಯೋಗಿಸಿರುವುದು ಶೋಭೆಯಲ್ಲ. ಇದು ಅವರ ಶೈಕ್ಷಣಿಕ ಮಟ್ಟವನ್ನು ತೋರಿಸುತ್ತದೆ’ ಎಂದಿದ್ದಾರೆ.</p>.<p class="bodytext">‘ಮುಖ್ಯಮಂತ್ರಿ ಅವರು ಬಳಸಿರುವ ಭಾಷೆಯು ಪ್ರಜಾಪ್ರಭುತ್ವವನ್ನು ಹಾಳುಗೆಡವುಂಥದ್ದು. ಇದು ಸಮಾಜವನ್ನು ವಿಭಜಿಸುವ ಗುರಿ ಹೊಂದಿದೆ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ಹೇಳಿದ್ದಾರೆ.</p>.<p><strong>ಉತ್ತರಪ್ರದೇಶ ಸಿ.ಎಂ ವಿರುದ್ಧ ಕೋರ್ಟ್ಗೆ ದೂರು</strong></p>.<p><strong>ಮುಜಾಫರ್ಪುರ (ಬಿಹಾರ): </strong>‘ಅಬ್ಬಾ ಜಾನ್’ ಪದ ಪ್ರಯೋಗಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಸೋಮವಾರ ಬಿಹಾರದ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.</p>.<p>ಸಾಮಾಜಿಕ ಕಾರ್ಯಕರ್ತೆ ತಮನ್ನಾ ಹಶ್ಮಿ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ‘ಆದಿತ್ಯನಾಥ್ ಅವರು ಈ ಪದ ಬಳಸುವ ಮೂಲಕ ಮುಸ್ಲಿಂ ಸಮುದಾಯವನ್ನು ಅವಮಾನಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.</p>.<p>‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಐಪಿಸಿ ಸೆಕ್ಷನ್ ಅಡಿ ಆದಿತ್ಯನಾಥ್ ಅವರ ವಿಚಾರಣೆ ನಡೆಸಬೇಕು’ ಎಂದೂ ಅವರು ನ್ಯಾಯಾಲಯವನ್ನು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಲಖನೌ</strong>: ಮುಸ್ಲಿಂ ಸಮುದಾಯ ಹಾಗೂ ಸಮಾಜವಾದಿ ಪಕ್ಷವನ್ನು (ಎಸ್ಪಿ) ಉದ್ದೇಶಿಸಿ ‘ಅಬ್ಬಾ ಜಾನ್ ಎಂದು ಕರೆಯಲಾಗುವ ಈ ಜನರು’ ಎಂದು ವಾಗ್ದಾಳಿ ನಡೆಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ರಾಜಕೀಯ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.</p>.<p class="title">ಕುಶಿನಗರದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆದಿತ್ಯನಾಥ್ ಅವರು, ‘2017ಕ್ಕಿಂತ ಮೊದಲು ಜನರು ಈಗಿನಂತೆ ಪಡಿತರ ಪಡೆಯುತ್ತಿರಲಿಲ್ಲ. ಆಗ ‘ಅಬ್ಬಾ ಜಾನ್’ ಎಂದು ಕರೆಯಲಾಗುತ್ತಿದ್ದ ಜನರು ಈ ಪಡಿತರವನ್ನು ಜೀರ್ಣಿಸಿಕೊಳ್ಳುತ್ತಿದ್ದರು’ ಎಂದಿದ್ದರು.</p>.<p class="title">‘ಕುಶಿನಗರದ ಪಡಿತರ ಧಾನ್ಯವು ಆಗ ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ರವಾನೆಯಾಗುತ್ತಿತ್ತು. ಇವತ್ತು ಯಾರಾದರೂ ಬಡಜನರ ಪಡಿತರವನ್ನು ಕಬಳಿಸಿದರೆ ಅಂಥವರನ್ನು ಜೈಲಿಗೆ ಕಳುಹಿಸಲಾಗುತ್ತದೆ’ ಎಂದೂ ಅವರು ಹೇಳಿದ್ದರು.</p>.<p class="title">ಉರ್ದುವಿನಲ್ಲಿ ತಂದೆಯನ್ನು ‘ಅಬ್ಬಾ ಜಾನ್’ ಎಂದು ಕರೆಯಲಾಗುತ್ತದೆ.</p>.<p class="bodytext">ಆದಿತ್ಯನಾಥ್ ಅವರ ‘ಅಬ್ಬಾ ಜಾನ್’ ಎಂಬ ಪದ ಪ್ರಯೋಗಕ್ಕೆ ನ್ಯಾಷನಲ್ ಕಾನ್ಫರೆನ್ಸ್ನ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಟ್ವಿಟರ್ನಲ್ಲಿ ಟೀಕಿಸಿದ್ದರು.</p>.<p class="bodytext">‘ಬಿಜೆಪಿಯು ಕೋಮುವಾದದ ಕಾರ್ಯತಂತ್ರ (ಅಜೆಂಡಾ) ಬಿಟ್ಟು ಯಾವುದೇ ಚುನಾವಣೆಯನ್ನು ನಡೆಸುವುದಿಲ್ಲ. ಹಿಂದೂಗಳ ಪಡಿತರವನ್ನು ಮುಸ್ಲಿಮರು ತಿಂದಿದ್ದಾರೆ ಎಂದು ಹೇಳುವ ಮೂಲಕ ಆದಿತ್ಯನಾಥ್ ಮುಸ್ಲಿಮರ ವಿರುದ್ಧದ ತಮ್ಮ ದ್ವೇಷವನ್ನು ಕಾರಿದ್ದಾರೆ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.</p>.<p class="bodytext">ಸಮಾಜವಾದಿ ಪಕ್ಷದ ಶಾಸಕ ಅಶುತೋಷ್ ಸಿನ್ಹಾ ಅವರು, ‘ಮುಖ್ಯಮಂತ್ರಿಯಂಥ ಉನ್ನತ ಸ್ಥಾನದಲ್ಲಿರುವ ಯೋಗಿ ಆದಿತ್ಯನಾಥ್ ಅವರು ಇಂಥ ಅಸಾವಿಂಧಾನಿಕ ಪದ ಪ್ರಯೋಗಿಸಿರುವುದು ಶೋಭೆಯಲ್ಲ. ಇದು ಅವರ ಶೈಕ್ಷಣಿಕ ಮಟ್ಟವನ್ನು ತೋರಿಸುತ್ತದೆ’ ಎಂದಿದ್ದಾರೆ.</p>.<p class="bodytext">‘ಮುಖ್ಯಮಂತ್ರಿ ಅವರು ಬಳಸಿರುವ ಭಾಷೆಯು ಪ್ರಜಾಪ್ರಭುತ್ವವನ್ನು ಹಾಳುಗೆಡವುಂಥದ್ದು. ಇದು ಸಮಾಜವನ್ನು ವಿಭಜಿಸುವ ಗುರಿ ಹೊಂದಿದೆ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ಹೇಳಿದ್ದಾರೆ.</p>.<p><strong>ಉತ್ತರಪ್ರದೇಶ ಸಿ.ಎಂ ವಿರುದ್ಧ ಕೋರ್ಟ್ಗೆ ದೂರು</strong></p>.<p><strong>ಮುಜಾಫರ್ಪುರ (ಬಿಹಾರ): </strong>‘ಅಬ್ಬಾ ಜಾನ್’ ಪದ ಪ್ರಯೋಗಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಸೋಮವಾರ ಬಿಹಾರದ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.</p>.<p>ಸಾಮಾಜಿಕ ಕಾರ್ಯಕರ್ತೆ ತಮನ್ನಾ ಹಶ್ಮಿ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ‘ಆದಿತ್ಯನಾಥ್ ಅವರು ಈ ಪದ ಬಳಸುವ ಮೂಲಕ ಮುಸ್ಲಿಂ ಸಮುದಾಯವನ್ನು ಅವಮಾನಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.</p>.<p>‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಐಪಿಸಿ ಸೆಕ್ಷನ್ ಅಡಿ ಆದಿತ್ಯನಾಥ್ ಅವರ ವಿಚಾರಣೆ ನಡೆಸಬೇಕು’ ಎಂದೂ ಅವರು ನ್ಯಾಯಾಲಯವನ್ನು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>