ಕಲ್ವಾ, ಖಾರಾಘರ್, ಠಾಣೆ, ಪನ್ವೇಲ್, ಡೊಂಬಿವಲಿ, ಕಲ್ಯಾಣ್ ಸೇರಿದಂತೆ ಹಲವು ಉಪನಗರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.ವಿದ್ಯುತ್ ಸರಬರಾಜು ಸ್ಥಗಿತಗೊಂಡ ಎರಡು ಗಂಟೆಗಳ ಬಳಿಕ, ಮಧ್ಯಾಹ್ನ 12 ಗಂಟೆಯ ವೇಳೆಗೆ ವಿದ್ಯುತ್ ಸರಬರಾಜನ್ನು ಯಥಾಸ್ಥಿತಿಗೆ ತರುವ ಕೆಲಸ ನಡೆಯಿತು. ಅಗತ್ಯ ಸೇವೆಗಳ ಉದ್ಯೋಗಿಗಳಾಗಿ ಉಪನಗರ ರೈಲು ಸೇವೆ ಆರಂಭಿಸಲಾಗಿದ್ದು, ವ್ಯತ್ಯಯದ ಬಳಿಕಅಂದಾಜು ಎರಡೂವರೆ ಗಂಟೆಗಳ ನಂತರ ರೈಲು ಸೇವೆ ಪುನರಾರಂಭವಾಯಿತು. ಈ ವ್ಯತ್ಯಯಕ್ಕೆ ಟಾಟಾ ಪವರ್ ಕಾರಣ ಎಂದು ಪಶ್ಚಿಮ ರೈಲ್ವೆ ಹಾಗೂ ಕೇಂದ್ರೀಯ ರೈಲ್ವೆ ತಿಳಿಸಿದೆ. 2018ರ ಜೂನ್ನಲ್ಲೂ ಇದೇ ರೀತಿ ಇಡೀ ಮಹಾನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.