ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಕ್ರವಾರ ಹುಬ್ಬಳ್ಳಿಯಿಂದ ಗದಗಿಗೆ ಹೊರಡುತ್ತಿದ್ದಾಗ ಮಾರ್ಗ ಮಧ್ಯೆದ ನಲವಾಡಿ ಗ್ರಾಮದ ಬಳಿ ಪಕ್ಷದ ಕಾರ್ಯಕರ್ತೆಯ ಪುಷ್ಪವೃಷ್ಟಿಗೈದು ಸ್ವಾಗತಿಸಿದರು. ಡಿಕೆಶಿ ಪರ ಜೈಕಾರ ಕೂಗಿದರು ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜಯವಾಗಲಿ ಎಂದು ಕಾರ್ಯಕರ್ತನೊಬ್ಬ ಕೂಗಿದ. ತಕ್ಷಣ ಅತ್ತ ಕಡೆ ನೋಡಿದ ಶಿವಕುಮಾರ್ ಹೀಗೆ ಕೂಗದಂತೆ ಕೈಸನ್ನೆ ಮಾಡಿ ತಕ್ಷಣ ತಮ್ಮ ಕಾರಿನೊಳಗೆ ಕುಳಿತು ಹೊರಟುಹೋದರು.